7 ಜನರ ಶವ ಪತ್ತೆ

ಇಂಫಾಲ (ಮಣಿಪುರ) – ಮಣಿಪುರದಲ್ಲಿ ಕಳೆದ ತಿಂಗಳಿನಿಂದ ಪ್ರಾರಂಭವಾಗಿರುವ ಹಿಂಸಾಚಾರ ನಿಂತಿಲ್ಲ. ಕೇಂದ್ರ ಗೃಹಸಚಿವ ಅಮಿತ ಶಹಾ ಇವರ ಪ್ರವಾಸದ ಬಳಿಕವೂ ಇಲ್ಲಿ ಹಿಂಸಾಚಾರ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಮೈತೇಯಿ ಮತ್ತು ಕುಕಿ ಪಂಗಡದವರ ಗ್ರಾಮಗಳಲ್ಲಿ ನಡೆದ ಆಕ್ರಮಣದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಭದ್ರತಾಪಡೆಗಳು ಕಕಚಿಂಗ ಪ್ರದೇಶದ ಸುಗನೂ ಅರಣ್ಯದಿಂದ 7 ಶವಗಳನ್ನು ಹೊರಗೆ ತೆಗೆದಿದ್ದಾರೆ ಈ ಶವಗಳು ಮೇ 28 ರಂದು ಕ್ರೈಸ್ತ ಕುಕಿ ಬಂಡುಕೋರರು ನಡೆಸಿದ ಆಕ್ರಮಣದಲ್ಲಿ ಹತ್ಯೆಗೀಡಾಗಿರುವ ಹಿಂದೂ ಮೈತೇಯಿ ಜನರಾಗಿದ್ದಾರೆಂದು ಹೇಳಲಾಗುತ್ತಿದೆ. ಘಟನೆಯ ಬಳಿಕ ಈ ಪರಿಸರದ 10 ಗ್ರಾಮಸ್ಥರು ನಾಪತ್ತೆಯಾಗಿದ್ದಾರೆಂದು ಮಾಹಿತಿಯಿದೆ. ರಾಜ್ಯದಲ್ಲಿ ಹಿಂದೂ ಮೈತೇಯಿ ಪಂಗಡದವರನ್ನು ಪರಿಶಿಷ್ಟ ಜಾತಿಪಂಗಡದ ಸ್ಥಾನಮಾನ ನೀಡುವ ಕೋರಿಕೆಯ ವಿರುದ್ಧ ಕ್ರೈಸ್ತ ಕುಕಿ ಸಮಾಜ ಹಿಂಸಾಚಾರ ನಡೆಸುತ್ತಿದೆ. ಭಾರತೀಯ ಸೈನ್ಯದ ವಕ್ತಾರ, ಜೂನ 3 ರಂದು ರಾಜ್ಯದ 40 ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಹೆಚ್ಚಿನ ಶಸ್ತ್ರಾಸ್ತ್ರಗಳು ಆಟೊಮೆಟಿಕ್ ಆಗಿದೆ ಎಂದು ಹೇಳಿದ್ದಾರೆ.
3-Member Team To Look Into Manipur Violence That KIlled Over 80 People https://t.co/UaYPPwOuuY pic.twitter.com/GX2XcXhfJ3
— NDTV News feed (@ndtvfeed) June 4, 2023
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!