
ಕಟ್ಮಾಂಡು (ನೇಪಾಳ) – ಭಾರತದ ಹೊಸ ಸಂಸತ್ ಭವನದಲ್ಲಿ ಹಾಕಲಾಗಿರುವ ಅಖಂಡ ಭಾರತದ ನಕ್ಷೆಯಿಂದ ನೇಪಾಳ ಸಹಿತ ಭಾರತದ ಎಲ್ಲಾ ನೆರೆಯ ದೇಶಗಳಲ್ಲಿ ಅನಾವಶ್ಯಕ ಮತ್ತು ಅಪಾಯಕಾರಿ ವಿವಾದ ನಿರ್ಮಾಣವಾಗಬಹುದು, ಎಂದು ನೇಪಾಳದ ಮಾಜಿ ಪ್ರಧಾನಮಂತ್ರಿ ಹಾಗೂ ನೇಪಾಳ ಸಮಾಜವಾದಿ ಪಕ್ಷದ ಅಧ್ಯಕ್ಷ ಬಾಬುರಾವ್ ಭಟ್ಟರಾಯ ಇವರು ಟ್ವೀಟ್ ಮೂಲಕ ಹೇಳಿದ್ದಾರೆ. ಈ ನಕ್ಷೆಯಲ್ಲಿ ನೇಪಾಳದ ಕಪಿಲವಸ್ತು ಮತ್ತು ಲುಂಬಿನಿ ಪ್ರದೇಶ ತೋರಿಸಲಾಗಿರುವುದರ ಬಗ್ಗೆ ಅವರು ನಕ್ಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಭಟ್ಟರಾಯ ಮಾತು ಮುಂದುವರೆಸಿ, ಈ ನಕ್ಷೆಯಿಂದ ಭಾರತದ ನೆರೆಯ ಹೆಚ್ಚಿನ ದೇಶಗಳ ಜೊತೆ ಇರುವ ದ್ವಿಪಕ್ಷೀಯ ಸಂಬಂಧ ಹಾಳಾಗಬಹುದು ಹಾಗೂ ಅದರ ವಿಶ್ವಾಸಾರ್ಹತೆ ಕಡಿಮೆ ಆಗಬಹುದು. ಭಾರತೀಯ ನೇತೃತ್ವದಿಂದ ಈ ನಕ್ಷೆಯ ಬಗ್ಗೆ ವಾಸ್ತವಿಕ ಮಾಹಿತಿ ಮತ್ತು ಪರಿಣಾಮದ ಬಗ್ಗೆ ಹೇಳಬೇಕು ಎಂದು ಹೇಳಿದರು.

ಮಾಜಿ ಪ್ರಧಾನ ಮಂತ್ರಿ ಕೆ.ಪಿ. ಶರ್ಮ ಓಲಿ ಇವರಿಂದಲೂ ವಿರೋಧ !
ಅಖಂಡ ಭಾರತದ ನಕ್ಷೆಗೆ ನೇಪಾಳದ ಭಾರತದ್ವೇಷಿ ಮತ್ತು ಚೀನಾ ಓಲೈಸುವ ಮಾಜಿ ಪ್ರಧಾನ ಮಂತ್ರಿ ಕೆ.ಪಿ. ಶರ್ಮ ಓಲಿ ಇವರು ಕೂಡ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಪ್ರಸ್ತುತ ಭಾರತದ ಪ್ರವಾಸದಲ್ಲಿರುವ ನೇಪಾಳದ ಪ್ರಧಾನ ಮಂತ್ರಿ ಪುಷ್ಪಕುಮಾರು ದಹಲ ಪ್ರಚಂಡ ಇವರು ಅಖಂಡ ಭಾರತದ ನಕ್ಷೆಯಲ್ಲಿ ನೇಪಾಳದ ೨ ಪ್ರಾಂತಗಳನ್ನು ಸೇರಿಸುರುವುದಕ್ಕಾಗಿ ವಿರೋಧ ವ್ಯಕ್ತಪಡಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವುಅಖಂಡ ಭಾರತದ ನಕ್ಷೆಯ ಮೂಲಕ ಭಾರತದ ಇತಿಹಾಸ ತೋರಿಸಲಾಗಿದೆ, ಅದು ಎಂದಿಗೂ ನಿರಾಕರಿಸಲಾಗದು. ಹಿಂದೆ ಭಾರತ ಅಖಂಡವಾಗಿತ್ತು ಮತ್ತು ಅದರಲ್ಲಿ ಯಾವ ಪ್ರದೇಶ ಇತ್ತು ಇದು ಅದರಲ್ಲಿ ತೋರಿಸಲಾಗಿದೆ. ಇದರಿಂದ ಯಾರಿಗೆ ಹೊಟ್ಟೆಯುರಿಯುತ್ತಿದ್ದರೆ ಅದಕ್ಕೆ ಹಾಸ್ಯಸ್ಪದ ಎಂದೇ ಹೇಳಬೇಕು ! |
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಸ್ಪೋರ್ಟ್ನಿಂದ ಪೌರತ್ವ ಸಾಬೀತಾಗುವುದಿಲ್ಲ! – ಕೇಂದ್ರ ಸರಕಾರ
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!