ಶೋಭಾಯಾತ್ರೆಯ ಆಯೋಜಕರ ಮೇಲೆ ದೂರು ದಾಖಲಿಸಿ ಬಂಧಿಸುವಂತೆ ಆಗ್ರಹ !

ಮಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ 81ನೇ ಜನ್ಮೋತ್ಸವದ ನಿಮಿತ್ತ ಆಯೋಜಿಸಲಾಗಿರುವ ಹಿಂದೂ ಏಕತಾ ಶೋಭಾಯಾತ್ರೆಗೆ ನಿಷೇಧಿತ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷವಾದ ಎಸ್.ಡಿ.ಪಿ.ಐ. ಸಂಘಟನೆಯು ವಿರೋಧ ವ್ಯಕ್ತಪಡಿಸಿದ್ದು, ಆಯೋಜಕರ ವಿರುದ್ಧ ದೇಶದ್ರೋಹದ ಅಡಿಯಲ್ಲಿ ದೂರು ದಾಖಲಿಸಿ ಬಂಧನ ಮಾಡಬೇಕು’ ಎಂದು ಒತ್ತಾಯಸುತ್ತಿದ್ದಾರೆ. (ಅಮಾಯಕ ಜನರ ವಿರುದ್ಧ ಅಪರಾಧ ದಾಖಲಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸುವುದು, ಅಪರಾಧವಲ್ಲವೇ ? ಇದಕ್ಕಾಗಿ ಇಂತಹವರಿಗೆ ಬಂಧಿಸಿ ಜೈಲಿಗಟ್ಟಬೇಕು ! – ಸಂಪಾದಕರು)
ಜಾತ್ಯಾತೀತ ಭಾರತದಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರದ ಪರಿಕಲ್ಪನೆಯ ಕಾರ್ಯಕ್ರಮ ಆಯೋಜಿಸುವುದು ರಾಷ್ಟ್ರದ್ರೋಹ ಕೃತ್ಯವಾಗಿದೆ. ಈ ಕಾರ್ಯಕ್ರಮಕ್ಕೆ ತಡೆ ನೀಡುವುದರ ಜೊತೆಗೆ ಆಯೋಜಕರ ವಿರುದ್ಧ @CMofKarnataka @DgpKarnataka@Spdk @compolmlr ಕೂಡಲೇ ದೇಶದ್ರೋಹದ ಅಡಿಯಲ್ಲಿ ಕೇಸ್ ದಾಖಲಿಸಿ ಬಂದಿಸಬೇಕು.@siddaramaiah pic.twitter.com/xBhA1GdGe2
— Anwar Sadath Bajathur (@Shadathbajathor) May 23, 2023
ಸನಾತನ ಸಂಸ್ಥೆಯ ವತಿಯಿಂದ ಹಿಂದೂ ರಾಷ್ಟ್ರ-ಜಾಗೃತಿ ಅಭಿಯಾನದ ಅಡಿಯಲ್ಲಿ ಶೋಭಾಯಾತ್ರೆಯನ್ನು ಆಯೋಜಿಸಲಾಗಿದ್ದು, ಇದೇ 27 ಮೇ ಶನಿವಾರ ಸಂಜೆ 4 ಗಂಟೆಗೆ ಬಲ್ಮಠ ಜ್ಯೂಸ್ ಜಂಕ್ಷನ್ ಮಾರ್ಗದಿಂದ ಪ್ರಾರಂಭಗೊಳ್ಳಲಿದೆ. ಈ ಶೋಭಾಯಾತ್ರೆ ವಿರುದ್ಧ ಟ್ವೀಟ್ ಮಾಡಿರುವ ಎಸ್.ಡಿ.ಪಿ.ಐ. ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸದತ್ ಬಜತುರ್, ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಟ್ಯಾಗ್ ಮಾಡಿ ‘ಜಾತ್ಯಾತೀತ ಭಾರತದಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರದ ಪರಿಕಲ್ಪನೆಯ ಕಾರ್ಯಕ್ರಮ ಆಯೋಜಿಸುವುದು ರಾಷ್ಟ್ರದ್ರೋಹ ಕೃತ್ಯವಾಗಿದೆ. (ಹಿಂದೂ ರಾಷ್ಟ್ರದ ಅಂಶವನ್ನು ಭಾರತವಿರೋಧಿ ಎಂದು ನಿರ್ಧರಿಸುವವರು ಭಯೋತ್ಪಾದನೆಯ `ಗಜವಾ-ಎ-ಹಿಂದ’ನ (ಭಾರತವನ್ನು ಇಸ್ಲಾಮೀಕರಣ ಮಾಡುವ) ಬಗ್ಗೆ ಚಕಾರವೂ ಎತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಈ ಕಾರ್ಯಕ್ರಮಕ್ಕೆ ತಡೆ ನೀಡುವುದರ ಜೊತೆಗೆ ಆಯೋಜಕರ ವಿರುದ್ಧ ದೇಶದ್ರೋಹದ ಅಡಿಯಲ್ಲಿ ದೂರು ದಾಖಲಿಸಿ ಬಂಧನ ಮಾಡಬೇಕು` ಎಂದು ಆಗ್ರಹಿಸಲಾಗಿದೆ.
ಸಂಪಾದಕೀಯ ನಿಲುವುರಾಜ್ಯದಲ್ಲಿ ಈಗ ಕಾಂಗ್ರೆಸ್ ಸರಕಾರ ಬಂದಿದ್ದರಿಂದ ಮುಸಲ್ಮಾನ ಪಕ್ಷವಾಗಿರುವ ಎಸ್.ಡಿ.ಪಿ.ಐ. ನಿಂದ ವಿರೋಧವಾಗುವುದು ಆಶ್ಚರ್ಯವೇನಲ್ಲ ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !