‘ಬಜರಂಗ ದಳವನ್ನು ನಿಷೇಧಿಸುವ ನಿರ್ಧಾರವನ್ನು 70 ವರ್ಷಗಳ ಹಿಂದೆ ತೆಗೆದುಕೊಂಡಿದ್ದರೆ, ದೇಶವು ಅವನತಿಗೆ ಹೋಗುತ್ತಿರಲಿಲ್ಲ!’ – ಸೈಯದ್ ಅರ್ಷದ್ ಮದನಿ

`ಜಮೀಯತ್ ಉಲೇಮಾ-ಎ-ಹಿಂದ್’ನ ಅಧ್ಯಕ್ಷ ಸೈಯದ್ ಅರ್ಷದ್ ಮದನಿ ವಿಷಕಾರಿದ !

ಸೈಯದ್ ಅರ್ಷದ್ ಮದನಿ

ಮುಂಬಯಿ : ಕಾಂಗ್ರೆಸ್‌ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಡುಗಡೆ ಮಾಡಿರುವ ಘೋಷಣಾಪತ್ರದಲ್ಲಿ ಬಜರಂಗ ದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದೆ. ಒಂದು ವೇಳೆ 70 ವರ್ಷಗಳ ಹಿಂದೆಯೇ ಈ ನಿರ್ಧಾರ ಕೈಗೊಂಡಿದ್ದರೆ ಇಂದು ದೇಶ ಅವನತಿಯತ್ತ ಸಾಗುತ್ತಿರಲಿಲ್ಲ, ಎಂದು ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಸೈಯದ್ ಅರ್ಷದ್ ಮದನಿ ಹೇಳಿದ್ದಾರೆ.

ಮದನಿ ತಮ್ಮ ಮಾತನ್ನು ಮುಂದುವರೆಸುತ್ತಾ, ಕಾಂಗ್ರೆಸ್ ತನ್ನ ಘೋಷಣಾಪತ್ರದಲ್ಲಿ ನಿಷೇಧದ ಭರವಸೆ ನೀಡಿ ತಪ್ಪು ಮಾಡಿದೆ ಎಂದೂ ಹೇಳಲಾಗುತ್ತಿದೆ. ನನಗೆ ಇದು ತಪ್ಪೆಂದು ಅನಿಸುವುದಿಲ್ಲ, ಆದರೆ ತಪ್ಪನ್ನು ತಿದ್ದುವ ಪ್ರಯತ್ನ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ. (ಕಾಂಗ್ರೆಸ್ ಜಿಹಾದಿ ಸಂಘಟನೆಗಳನ್ನು ನಿಷೇಧಿಸಲಿಲ್ಲ, ಇದು ದೊಡ್ಡ ತಪ್ಪು! ಅಲ್ಲದೆ, ಮುಸ್ಲಿಂ ಸಂಘಟನೆಗಳು, ಅವರ ನಾಯಕರು, ಧರ್ಮಗುರುಗಳು ಎಂದಿಗೂ ಜಿಹಾದಿ ಭಯೋತ್ಪಾದಕರ ವಿರುದ್ಧ ಚಕಾರವೆತ್ತುವುದಿಲ್ಲ ಅಥವಾ ಅವರು ಸಂಘಟಿತವಾಗಿ ಅವರನ್ನು ವಿರೋಧಿಸುವುದಿಲ್ಲ. ಬದಲಾಗಿ ಅವರು ಜಿಹಾದಿ ಸಂಘಟನೆಗಳನ್ನು ನಿಷೇಧಿಸಿದರೆ ಅದನ್ನು ವಿರೋಧಿಸುತ್ತಾರೆ ಎಂಬುದನ್ನು ಗಮನಿಸಿ ! – ಸಂಪಾದಕರು)

(ಸೌಜನ್ಯ :TV9 Bharatvarsh)

ಸಂಪಾದಕರ ನಿಲುವು

  • ಬಜರಂಗ ದಳವನ್ನು 1984 ರಲ್ಲಿ ಸ್ಥಾಪಿಸಲಾಯಿತು ಮತ್ತು 1992 ರಲ್ಲಿ ಕಾಂಗ್ರೆಸ್ ಅದನ್ನು ರಾಷ್ಟ್ರವ್ಯಾಪಿ ನಿಷೇಧಿಸಿತು; ಆದರೆ ಒಂದು ವರ್ಷದ ನಂತರ ಅದನ್ನು ರದ್ದುಪಡಿಸಲಾಯಿತು. ಈ ಇತಿಹಾಸ ತಿಳಿಯದ ಮದನಿಯಂತಹ ಹಿಂದೂದ್ವೇಷಿಗಳು ಇಂತಹ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುತ್ತಾರೆ !
  • ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಗಳನ್ನು ನಿರ್ನಾಮ ಮಾಡುತ್ತಿದ್ದರೆ ಕಾಶ್ಮೀರದಲ್ಲಿ ಹಿಂದೂಗಳ ಕಗ್ಗೊಲೆಯಾಗುತ್ತಿರಲಿಲ್ಲ, ಅಲ್ಲಿಂದ ಅವರು ಪಲಾಯನ ಮಾಡಬೇಕಾಗಿರಲಿಲ್ಲ, ದೇಶದ ಸಾವಿರಾರು ಜನರು ಭಯೋತ್ಪಾದನೆಯಿಂದ ಸಾವನ್ನಪ್ಪುತ್ತಿರಲಿಲ್ಲ ಎಂದು ಮದನಿ ಏಕೆ ಹೇಳುವುದಿಲ್ಲ ?