ಜೈಸಲ್ಮೇರ್‌ನಲ್ಲಿ (ರಾಜಸ್ಥಾನ)ನ ಆಡಳಿತವು ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳ ೫೦ ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿತು !

ಜೈಸಲ್ಮೇರ್ (ರಾಜಸ್ಥಾನ) – ಇಲ್ಲಿನ ಅಮರ ಸಾಗರ ಪ್ರದೇಶದಲ್ಲಿ ಪಾಕಿಸ್ತಾನಿ ನಿರಾಶ್ರಿತ ಹಿಂದೂ ಕುಟುಂಬಗಳ ಮನೆಗಳನ್ನು ಆಡಳಿತವು ಬುಲ್ಡೋಜರ್ ನಿಂದ ನೆಲಸಮಗೊಳಿಸಿದೆ. ಇಲ್ಲಿ ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳು ಬಹಳ ಕಾಲದಿಂದ ವಾಸಿಸುತ್ತಿದ್ದರು. ಜಿಲ್ಲಾಧಿಕಾರಿ ಟೀನಾ ಡಾಬಿ ಇವರ ಆದೇಶದ ನಂತರ ಆಡಳಿತವು ಈ ಕ್ರಮ ಕೈಗೊಂಡಿದೆ. ಆಡಳಿತವು ಕಾರ್ಯನಿರ್ವಹಿಸಲು ಬಂದಾಗ, ಮಹಿಳೆಯರು ಬಲವಾಗಿ ವಿರೋಧಿಸಿದರು; ಆದರೆ ಯಾರ ಮಾತನ್ನೂ ಕೇಳದೆ ಈ ಮನೆಗಳನ್ನು ಕೆಡವಲಾಗಿದೆ. ಅವರ ೫೦ಕ್ಕೂ ಹೆಚ್ಚು ಮಣ್ಣಿನ ಮನೆಗಳು ನೆಲಸಮ ಮಾಡಲಾಗಿದೆ. ಈ ಕಾರ್ಯಾಚರಣೆಯಿಂದಾಗಿ ೧೫೦ ಕ್ಕೂ ಹೆಚ್ಚು ಮಹಿಳೆಯರು, ಪುರುಷರು ಹಾಗೂ ಮಕ್ಕಳು ಬೀದಿ ಪಾಲಾಗಿದ್ದಾರೆ. ಈ ಮನೆಗಳನ್ನು ಅಮರ ಸಾಗರದ ಬಳಿ ಸರೋವರವಿದೆ ಆ ಸರೋವರದ ಬಳಿ ನಿರ್ಮಿಸಲಾಗಿತ್ತು.

ಸಂಪಾದಕರು

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಎಂದರೆ ಹಿಂದೂ ದ್ವೇಷಿ ಪಾಕಿಸ್ತಾನದ ಆಡಳಿತ ! ಕೇಂದ್ರದ ಭಾಜಪ ಸರಕಾರ ಈ ಹಿಂದೂಗಳಿಗೆ ಸಹಾಯ ಮಾಡಬೇಕು ಎಂದು ದೇಶದಾದ್ಯಂತವಿರುವ ಹಿಂದೂಗಳ ಅನಿಸುತ್ತದೆ !