ಮೇ 14 ರಂದು ತೇಲಂಗಾಣದಲ್ಲಿ ಹಿಂದೂ ಏಕತಾ ಯಾತ್ರೆಯ ಆಯೋಜನೆ

ತೇಲಂಗಾಣದ ಭಾಜಪ ಪ್ರದೇಶಾಧ್ಯಕ್ಷ ಬಂಡಿ ಸಂಜಯ ಕುಮಾರ

ಭಾಗ್ಯನಗರ (ತೇಲಂಗಾಣಾ) – ತೇಲಂಗಾಣದ ಭಾಜಪ ಪ್ರದೇಶಾಧ್ಯಕ್ಷ ಬಂಡಿ ಸಂಜಯ ಕುಮಾರ ಇವರು ಮೇ 14 ರಂದು ಕರೀಮ್ ನಗರದಲ್ಲಿ ಹಿಂದೂ ಏಕತಾ ಯಾತ್ರೆಯನ್ನು ನಡೆಸುವುದಾಗಿ ತಿಳಿಸುತ್ತಾ, `ದಿ ಕೇರಳ ಸ್ಟೋರಿ’ ಚಲನಚಿತ್ರದ ಕಲಾವಿದರನ್ನು ಮತ್ತು ನಿರ್ಮಾಪಕರನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆಂದು ಹೇಳಿದ್ದಾರೆ. ಹಾಗೆಯೇ ಬಂಡಿ ಸಂಜಯ ಕುಮಾರ ಇವರು ಟ್ವೀಟ್ ಮಾಡಿ ಈ ಚಲನಚಿತ್ರದ ನಟಿ ಅದಾ ಶರ್ಮಾಳಿಗೆ ಮೇ 11 ರಂದು ಇರುವ ಅವಳ ಹುಟ್ಟುಹಬ್ಬದ ನಿಮಿತ್ತ ಅವಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಹಿಂದೂ ಏಕತಾ ಯಾತ್ರೆಯಲ್ಲಿ 1 ಲಕ್ಷ ಜನರು ಭಾಗವಹಿಸುವ ಸಂಭಾವ್ಯತೆ ಇದೆಯೆಂದು ಸಂಜಯ ಕುಮಾರರು ತಿಳಿಸಿದ್ದಾರೆ. ಈ ಯಾತ್ರೆಯಲ್ಲಿ ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಭಾಗವಹಿಸಲಿದ್ದಾರೆ.