ಗೋವಾದಲ್ಲಿ ಶ್ರೀರಾಮಸೇನೆಯನ್ನು ವಿರೋಧಿಸುವ ಭಾಜಪವು ಹನುಮಾನ ಚಾಲೀಸಾದ ಪಠಣ ಮಾಡುತ್ತಿದೆ ! – ಕರ್ನಾಟಕದಲ್ಲಿನ ಕಾಂಗ್ರೆಸ್ ನೇತಾರರಾದ ಡಿ.ಕೆ. ಶಿವಕುಮಾರ

ಡಿ.ಕೆ. ಶಿವಕುಮಾರ

ದಾವಣಗೆರೆ (ಕರ್ನಾಟಕ) – ಗೋವಾದಲ್ಲಿ ಭಾಜಪದ ಸರಕಾರವಿದ್ದರೂ ಅಲ್ಲಿ ಶ್ರೀರಾಮಸೇನೆಗೆ ಪ್ರವೇಶವಿಲ್ಲ. ಅಲ್ಲಿ ಶ್ರೀರಾಮಸೇನೆಯು ಕಾರ್ಯ ಮಾಡಲಾರದು; ಆದರೆ ಅದೇ ಭಾಜಪದವರು ಕರ್ನಾಟಕದಲ್ಲಿ ಹನುಮಾನ ಚಾಲೀಸಾ ಪಠಣ ಮಾಡುತ್ತಾರೆ, ಎಂದು ಕರ್ನಾಟಕದಲ್ಲಿನ ಕಾಂಗ್ರೆಸ್ ನೇತಾರರಾದ ಡಿ.ಕೆ. ಶಿವಕುಮಾರರವರು ಟೀಕಿಸಿದ್ದಾರೆ. ಅವರು ಹೊನ್ನಾಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಡಿ.ಕೆ. ಶಿವಕುಮಾರರವರು ಮಾತನಾಡುತ್ತ ಬಜರಂಗ ಬಲಿ ಮತ್ತು ಬಜರಂಗದಳದ ನಡುವೆ ವ್ಯತ್ಯಾಸವಿದೆ. ನಾವು ದೇಶದ್ರೋಹಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ಬಜರಂಗದಳ ಎಂಬ ಹೆಸರಿಟ್ಟುಕೊಂಡು ದೇಶವನ್ನು ಕೊಳ್ಳೆ ಹೊಡೆಯುವವರ ಬಗ್ಗೆ ಮಾತನಾಡುತ್ತಿದ್ದೇವೆ. ಕರ್ನಾಟಕದ ಗಡಿ ಭಾಗಗಳಲ್ಲಿ ಬಜರಂಗದಳದಿಂದಾಗಿ ಎಷ್ಟು ಅಮಾಯಕರು ಸಾವನ್ನಪ್ಪಿದ್ದಾರೆ ? ಎಂಬುದರ ಅರಿವು ಅವರಿಗಿಲ್ಲ. ಪ್ರಧಾನಮಂತ್ರಿ ಮೋದಿಯವರು ಪ್ರಚಾರಸಭೆಗಳಲ್ಲಿ ಹನುಮಂತನ ಹೆಸರು ಹೇಳುತ್ತಾರೆ; ಇದರ ಬದಲು ಅವರು ತಮ್ಮ `ನರೇಂದ್ರ’ ಎಂಬ ಹೆಸರನ್ನು ಹೇಳಬೇಕು. ನರೇಂದ್ರ ಇದು ದೇವರ ಹೆಸರಲ್ಲವೇ ? ತಮ್ಮ ಹೆಸರನ್ನು ಹೇಳಬೇಕು, ಎಂದು ವಎಂಗ್ಯವಾಗಿ ಟೀಕಿಸಿದರು. (ಬಾಯಿ ಇದೆಯೆಂದು ಬೇಕಾದ ಹಾಗೆ ಮಾತನಾಡುವ ಕಾಂಗ್ರೆಸ್ ನೇತಾರರು ! – ಸಂಪಾದಕರು)