ಭಜರಂಗ ದಳದ ದಲಿತ ಬೆಂಬಲಿಗನ ಕೊಲೆ ಪ್ರಕರಣ ೪ ಮತಾಂಧ ಮುಸಲ್ಮಾನರ ಬಂಧನ !

ಅರವಿಂದ ಸಾಗರ

ನೈನಿತಾಲ (ಉತ್ತರಖಂಡ) – ಇಲ್ಲಿಯ ಭಜರಂಗದಳದ ಬೆಂಬಲಿಗ ಮತ್ತು ದಲಿತ ಅರವಿಂದ ಸಾಗರ ಇವರನ್ನು ಏಪ್ರಿಲ್ ೩೦ ರಂದು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದಲ್ಲಿ ಆಝಮ್, ಇರಾಫಾನ್, ರಿಝವಾನ್ ಮತ್ತು ಸಾಬಿರ್ ಈ ಮತಾಂಧ ಮುಸಲ್ಮಾನರನ್ನು ಬಂಧಿಸಲಾಗಿದೆ. ೨೪ ವರ್ಷದ ಅರವಿಂದ ಇವರ ಕುಟುಂಬದವರು ನೀಡಿರುವ ಮಾಹಿತಿಯ ಪ್ರಕಾರ ಹಂತಕರು ಅವರ ಮನೆಗೆ ಬಂದಿದ್ದರು. ಅವರು ಅರವಿಂದನನ್ನು ಹೊರಗೆ ಕರೆದು ೨೫೦ ಮೀಟರ್ ದೂರ ಕರೆದುಕೊಂಡು ಹೋಗಿ ಅವರ ಮೇಲೆ ಗುಂಡು ಹಾರಿಸಿದರು. ಒಂದು ತಿಂಗಳ ಹಿಂದೆ ಅರವಿಂದನ ಜೊತೆ ಹಂತಕ ವಿವಾದ ನಡೆದಿತ್ತು. ಆ ಸಮಯದಲ್ಲಿ ೨೦ – ೨೫ ಜನರು ನಮ್ಮ ಮನೆಗೆ ನುಗ್ಗಿ ಹೆಣ್ಣುಮಕ್ಕಳನು ಮುಟ್ಟುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೊಲೀಸರು ಮಾತ್ರ ಒಂದು ತಿಂಗಳ ಹಿಂದಿನ ಘಟನೆಯ ಬಗ್ಗೆ ನಿರಾಕರಿಸಿದ್ದಾರೆ. ಪೊಲೀಸರು ಹತ್ಯೆಯ ೩೬ ಗಂಟೆಯ ಒಳಗೆ ಕೊಲೆಗಾರರನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದುತ್ವನಿಷ್ಠರಲ್ಲದೆ ಅವರ ಬೆಂಬಲಿಗರೂ ಸಹ ಈಗ ಅಸುರಕ್ಷಿತವಾಗಿ ಬದುಕುತ್ತಿದ್ದಾರೆ, ಅದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ !