ಪ್ರಧಾನಮಂತ್ರಿ ಮೋದಿ ಅವರ ‘ಮನ ಕೀ ಬಾತ’ ಕಾರ್ಯಕ್ರಮದ ೧೦೦ ನೇ ಭಾಗ ಪ್ರಸಾರ !

ನಾಗರೀಕರು ದೇಶದಲ್ಲಿನ ಕನಿಷ್ಠ ೧೫ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಪ್ರಧಾನ ಮಂತ್ರಿಯವರಿಂದ ಕರೆ !

ನವ ದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಪ್ರತಿ ತಿಂಗಳು ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ‘ಮನ ಕಿ ಬಾತ’ ಏಪ್ರಿಲ್ ೩೦ ರಂದು ೧೦೦ ನೇ ಭಾಗ ಪ್ರಸಾರವಾಯಿತು. ಈ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ನಲ್ಲಿರುವ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿ ಸಹಿತ ದೇಶ-ವಿದೇಶಗಳಲ್ಲಿ ೪ ಲಕ್ಷ ಸ್ಥಳಗಳಲ್ಲಿ ಪ್ರಸಾರವಾಯಿತು. ಭಾಜಪವು ಪ್ರತಿಯೊಂದು ವಿಧಾನಸಭೆ ಮತದಾರ ಸಂಘದ ಸರಾಸರಿ ೧೦೦ ಸ್ಥಳಗಳಲ್ಲಿ ಭಾಷಣ ಕೇಳುವ ವ್ಯವಸ್ಥೆ ಮಾಡಿದ್ದರು.

(ಸೌಜನ್ಯ : Tv9 Kannada)

ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿ, ಸಚಿವರು ಮುಂತಾದವರು ಕೂಡ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮ ಕೇಳುವುದಕ್ಕಾಗಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮೋದಿ ಇವರು ಪ್ರವಾಸಿತಾಣಕ್ಕೆ ಒತ್ತು ನೀಡಿದರು. ಭಾರತೀಯರು ವಿದೇಶ ಪ್ರವಾಸಕ್ಕೆ ಹೋಗುವ ಬದಲು ತಮ್ಮ ತಮ್ಮ ರಾಜ್ಯದ ಹೊರಿತುಪಡಿಸಿ ದೇಶದಲ್ಲಿನ ಕನಿಷ್ಠ ೧೫ ಪ್ರವಾಸಿ ತಾಣಗಳಿಗೆ ಭೇಟಿ ನೀಡುಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಈ ಸಮಯದಲ್ಲಿ ಕರೆ ನೀಡಿದರು.