ಕರ್ನಾಟಕ ವಿಧಾನಸಭೆಯ ಚುನಾವಣೆ

ಬೀದರ – ಕಾಂಗ್ರೆಸ್ ನನಗೆ ಎಷ್ಟು ಬಾರಿ ನಿಂದಿಸಿದೆ, ಇದರ ಸೂಚಿ ನನಗೆ ಒಬ್ಬರು ಕಳುಹಿಸಿದ್ದಾರೆ. ಈ ಸೂಚಿಯ ಪ್ರಕಾರ ಕಾಂಗ್ರೆಸ್ ನನ್ನನ್ನು ೯೧ ಬಾರಿ ನಿಂದಿಸಿದೆ. ಇದೇ ಸಮಯ ಕಾಂಗ್ರೆಸ್ ಜನರಿಗೆ ಸೂರಾಜ್ಯ ನೀಡುವದಕ್ಕಾಗಿ ಮತ್ತು ತಮ್ಮ ಕಾರ್ಯಕರ್ತರ ಮನೋಬಲ ಹೆಚ್ಚಿಸುವುದಕ್ಕಾಗಿ ಖರ್ಚು ಮಾಡಿತ್ತಿದ್ದರೆ, ಕಾಂಗ್ರೆಸ್ಸಿಗೆ ಈ ದುಸ್ಥಿತಿ ಬರುತ್ತಿರಲಿಲ್ಲ. ಯಾರು ಸಾಮಾನ್ಯ ಜನರ ಯೋಚನೆ ಮಾಡುತ್ತಾನೆ, ಕಾಂಗ್ರೆಸ್ ಅವರನ್ನು ದ್ವೇಷಿಸುತ್ತದೆ. ಮಹಾಪುರುಷರನ್ನು ಕೂಡ ಕಾಂಗ್ರೆಸ್ ನಿಂದಿಸಿದೆ. ಕಾಂಗ್ರೆಸ್ ನಿಂದಿಸಿದರೂ ನಾನು ಜನರ ಕೆಲಸ ಮಾಡುತ್ತಲೇ ಇರುತ್ತೇನೆ.
(ಸೌಜನ್ಯ : Vijay Karnataka | ವಿಜಯ ಕರ್ನಾಟಕ)
ಜನರ ಬೆಂಬಲ ನನಗೆ ಇರುವುದರಿಂದ ನಿಂದನೆ ಮಣ್ಣು ಪಾಲಾಗುತ್ತಿದೆ. ಕರ್ನಾಟಕದ ಇನ್ನು ಸೇವೆ ಮಾಡುವುದಿದೆ. ಅದಕ್ಕಾಗಿ ಪೂರ್ಣ ಬಹುಮತದ ಸರಕಾರ ಬೇಕಿದೆ, ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರು ಇಲ್ಲಿ ಆಯೋಜಿಸಿರುವ ಪ್ರಚಾರ ಸಭೆಯಲ್ಲಿ ಜನರಿಗೆ ಕರೆ ನೀಡಿದರು. ಕರ್ನಾಟಕದಲ್ಲಿ ಮೇ ೧೦ ರಂದು ವಿಧಾನ ಸಭೆಯ ಚುನಾವಣೆಗಾಗಿ ಮತದಾನ ನಡೆಯುವುದು. ಅದರ ಪ್ರಯುಕ್ತ ಪ್ರಧಾನಮಂತ್ರಿ ಮೋದಿ ಇವರು ಭಾಜಪದ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರು ಪ್ರಧಾನಮಂತ್ರಿ ಮೋದಿ ಅವರನ್ನು ‘ವಿಷ ಸರ್ಪಕ್ಕೆ’ ಹೋಲಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮೋದಿ ಇವರು ಮೇಲಿನ ಹೇಳಿಕೆ ನೀಡಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”