ನಕ್ಸಲ್ ದಾಳಿಯಲ್ಲಿ ಮೃತಪಟ್ಟ ೧೦ ಯೋಧರಲ್ಲಿ ೮ ಮಂದಿ ಮಾಜಿ ನಕ್ಸಲೀಯರು

ಜಗದಲಪುರ (ಛತ್ತೀಸ್ಗಢ) – ಏಪ್ರಿಲ್ ೨೬ ರಂದು ನಕ್ಸಲ್ ದಾಳಿಯಲ್ಲಿ ೧೦ ಯೋಧರು ವೀರಮರಣವನ್ನಪ್ಪಿದ್ದರು. ಹತರಾದ ೧೦ ಸೈನಿಕರಲ್ಲಿ ೮ ಮಂದಿ ಮಾಜಿ ನಕ್ಸಲೀಯರಾಗಿದ್ದರು; ಆದರೆ ಅವರು ಶರಣಾಗಿ ಮುಖ್ಯವಾಹಿನಿಗೆ ಸೇರಿದರು. ಇದರಲ್ಲಿ ಒಬ್ಬ ಯೋಧನ ಸಂಬಂಧಿಯೊಬ್ಬರು, ‘ಇನ್ನು ಮುಂದೆ ನಮ್ಮ ಕುಟುಂಬವನ್ನು ಹುತಾತ್ಮರ ಕುಟುಂಬ ಎಂದು ಕರೆಯಲಾಗುವುದು. ನಕ್ಸಲ್ ಎಂಬ ಕಳಂಕವನ್ನು ಹಣೆಯ ಮೇಲೆ ಹೊತ್ತು ಸಾಯುವುದಕ್ಕಿಂತ ಸೈನ್ಯದ ವೇಷ ಧರಿಸಿ ಸಾಯುವುದು ಲಕ್ಷ ಪಟ್ಟು ಮೇಲು !’ ಎಂದು ಹೇಳಿದರು.
ನಕ್ಸಲ್ ದಾಳಿಯಲ್ಲಿ ಮಡಿದ ಯೋಧನ ಚಿತೆಯ ಮೇಲೆ ಪತ್ನಿ ಮಲಗಿದರು !
ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಯೋಧರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ. ಇದೇ ಘಟನೆಯಲ್ಲಿ ಯೋಧ ರಾಜು ಕರಟಮ್ ಅವರ ಮೃತ ದೇಹವನ್ನು ಕವಾಸಿಪುರದ ಅವರ ಗ್ರಾಮಕ್ಕ್ನೆತೆಡಗೆದುಕೊಂಡು ಬಂದಾಗ, ಅವರ ಪತ್ನಿ ಅವರ ಅಂತ್ಯಸಂಸ್ಕಾರದ ಸಮಯದಲ್ಲಿ ಮೃತದೇಹವನ್ನು ಅಪ್ಪಿಕೊಂಡರು. ಶವಸಂಸ್ಕಾರ ಆರಂಭವಾದ ಕೂಡಲೇ ಚಿತೆಯ ಮೇಲೆಯೇ ಮಲಗಿ ‘ನನ್ನನ್ನು ನನ್ನ ಗಂಡನೊಂದಿಗೆ ಸುಟ್ಟು ಹಾಕಿ’ ಎಂದು ಹಟ ಹಿಡಿದಳು. ಹಿರಿಯರು ಅವಳನ್ನು ತಿಳಿಸಿ ಹೇಳಿದಾಗ, ಅಂತ್ಯ ವಿಧಿಗಳನ್ನು ಪೂರ್ಣಗೊಳಿಸಲಾಯಿತು.
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!