ಜ್ಞಾನವಾಪಿಗೆ ಸಂಬಂಧಿಸಿದ ಎಲ್ಲಾ 7 ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು

ವಾರಣಾಸಿ ಜಿಲ್ಲಾ ನ್ಯಾಯಾಲಯ

ವಾರಣಾಸಿ (ಉತ್ತರ ಪ್ರದೇಶ) – ಇಲ್ಲಿಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಡಾ. ಅಜಯ್ ಕೃಷ್ಣ ವಿಶ್ವೇಶ್ ಇವರು ಜ್ಞಾನವಾಪಿ ಮತ್ತು ಶೃಂಗಾರ್ ಗೌರಿ ಪ್ರಕರಣದ 7 ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ. ಶೃಂಗಾರ್ ಗೌರಿ ಪ್ರಕರಣದ ಫಿರ್ಯಾದಿದಾರರಾದ ಲಕ್ಷ್ಮೀದೇವಿ, ಸೀತಾ ಸಾಹು, ಮಂಜು ವ್ಯಾಸ್ ಮತ್ತು ರೇಖಾ ಪಾಠಕ್ ಅವರು ಅರ್ಜಿ ಸಲ್ಲಿಸಿ ಬೇಡಿಕೆಯನ್ನು ಸಲ್ಲಿಸಿದ್ದರು.