ಭಟಿಂಡಾದ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಸಹ ಸೈನಿಕನ ಬಂಧನ

೪ ಸೈನಿಕರು ಹತ್ಯೆಗೀಡಾಗಿದ್ದರು !

ಭಟಿಂಡಾ (ಪಂಜಾಬ್) – ಇಲ್ಲಿನ ಸೇನಾ ನೆಲೆಯಲ್ಲಿ ಏಪ್ರಿಲ್ ೧೨ ರಂದು ನಡೆದ ಗುಂಡಿನ ದಾಳಿಯಲ್ಲಿ ೪ ಯೋಧರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಮೋಹನ್ ದೇಸಾಯಿ ಎಂಬ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ. ಮೋಹನ ದೇಸಾಯಿಯೇ ತನ್ನ ಸಹ ಸೈನಿಕರನ್ನು ಗುಂಡಿಕ್ಕಿ ಕೊಂದಿದ್ದ; ಆದರೆ ಆತ ಘಟನೆಯ ಬಗ್ಗೆ ಪೊಲೀಸರನ್ನು ದಾರಿ ತಪ್ಪಿಸಿದ್ದ ಮತ್ತು ಆತನೇ ಮುಖ್ಯ ಸಾಕ್ಷಿಯಾಗಿದ್ದ. ಪೊಲೀಸ್ ತನಿಖೆಯಿಂದ ಈತನೇ ಸೈನಿಕರನ್ನು ಕೊಂದದ್ದು ಬೆಳಕಿಗರ ಬಂದಿದೆ. ಕೊಲೆಗೆ ವೈಯಕ್ತಿಕ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಭಟಿಂಡಾ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ನಾಲ್ವರು ಸೈನಿಕರು ಅವನನ್ನು ಅವಮಾನ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಅದಕ್ಕೆ ಆತ ಸಿಟ್ಟಿಗೆದ್ದು ವೈಯಕ್ತಿಕ ದ್ವೇಷದಿಂದ ಈ ಕೊಲೆ ಮಾಡಿದೆಂದು ದೇಸಾಯಿ ವಿಚಾರಣೆಯ ಸಮಯದಲ್ಲಿ ಹೇಳಿದ್ದಾರೆ.