
ನವ ದೆಹಲಿ – ದೇಶದಲ್ಲಿನ ಜೈಲುಗಳಲ್ಲಿ ಕೇವಲ ಶೇಕಡಾ ೨೨ ರಷ್ಟು ಕೈದಿಗಳು ತಮ್ಮ ಅಪರಾಧಗಳು ಸಾಬೀತಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ, ಆದರೆ ಶೇಕಡಾ ೭೭ ರಷ್ಟು ಕೈದಿಗಳ ಮೊಕದ್ದಮೆಗಳು ಬಾಕಿಯಿರುವುದರಿಂದ ಇನ್ನೂ ಜೈಲುಗಳಲ್ಲಿ ಬಂಧಿಯಾಗಿದ್ದಾರೆ. ಈ ಮಾಹಿತಿಯನ್ನು ‘ಇಂಡಿಯಾ ಜಸ್ಟೀಸ್’ ವರದಿಯಿಂದ ಬೆಳಕಿಗೆ ಬಂದಿದೆ. ೨೦೧೦ ರಲ್ಲಿ ಈ ಸಂಖ್ಯೆ ೨ ಲಕ್ಷ ೪೦ ಸಾವಿರ ಇತ್ತು, ೨೦೨೧ ರಲ್ಲಿ ದ್ವಿಗುಣವಾಗಿ ೪ ಲಕ್ಷ ೩೦ ಸಾವಿರಕ್ಕೆ ಏರಿದೆ, ಅಂದರೆ ಶೇಕಡಾ ೭೮ ರಷ್ಟು ಹೆಚ್ಚಳವಾಗಿದೆ.
77% inmates in prisons undertrials, says India Justice Reporthttps://t.co/ejmQ0NI4ju pic.twitter.com/CalzkbD9E0
— Business Insider India🇮🇳 (@BiIndia) April 4, 2023
ಜೈಲುಗಳಲ್ಲಿ ಹೆಚ್ಚು ಕಾಲ ಉಳಿಯುವುದರ ಪರಿಣಾಮ !
ವರದಿಯಲ್ಲಿ, ಮೊಕದ್ದಮೆಗಳು ಬಾಕಿ ಇರುವ ಬಂಧಿತರನ್ನು ದೀರ್ಘಕಾಲ ಬಂಧಿಸಿರುವುದರಿಂದ, ಮೊಕದ್ದಮೆಯನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇದು ಆಡಳಿತಾತ್ಮಕ ಕೆಲಸವನ್ನು ಹೆಚ್ಚಿಸುವುದಲ್ಲದೆ ಪ್ರತಿಯೊಬ್ಬ ಕೈದಿಯ ಮೇಲೆ ಮಾಡುವ ಖರ್ಚು ಹೆಚ್ಚಿಸುತ್ತದೆ. ಇದರ ಹೊರೆ ಸರಕಾರದ ಬೊಕ್ಕಸಕ್ಕೆ ಬೀಳುತ್ತದೆ.
ಸಂಪಾದಕರ ನಿಲುವುಆರೋಪಿಗಳನ್ನು ಬಂಧಿಸಿ ಅವರ ವಿರುದ್ಧದ ಮೊಕದ್ದಮೆಗಳನ್ನು ಬಾಕಿ ಇಡುವುದು ಆರೋಪಿ ಮತ್ತು ದೂರು ನೀಡಿದವ ಇಬ್ಬರಿಗೂ ಅನ್ಯಾಯವಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು, ಸರಕಾರವು ಸಮಾರೋಪಾದಿಯಲ್ಲಿ ಪ್ರಯತ್ನಿಸುವ ಅವಶ್ಯಕತೆ ಇದೆ ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !