ಬಂಗಾಲದಲ್ಲಿ ದುಷ್ಕರ್ಮಿಗಳಿಂದ ಭಾಜಪದ ನಾಯಕನನ್ನು ಗುಂಡಿಕ್ಕಿ ಹತ್ಯೆ

ಬಂಗಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದು ಪ್ರತಿದಿನ ಬೆಳಕಿಗೆ ಬರುತ್ತಿದೆ

ಬಿಜೆಪಿ ಮುಖಂಡ ರಾಜು ಝಾ ಹತ್ಯೆ

ಕೊಲಕಾತಾ (ಬಂಗಾಳ) – ಬಂಗಾಲದ ಪೂರ್ವ ವರ್ಧಮಾನ ಜಿಲ್ಲೆಯಲ್ಲಿನ ಆಸನಸೊಲ – ದುರ್ಗಾಪುರ್ ಪ್ರದೇಶದಲ್ಲಿ ಭಾಜಪದ ನಾಯಕ ರಾಜು ಝಾ ಇವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕೊಲಕಾತಾದಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಝಾ ಇವರು ಅಲ್ಲಿಯ ಮಿಠಾಯಿ ಅಂಗಡಿಯ ಹತ್ತಿರ ನಿಲ್ಲಿಸಿದಾಗ ಕೆಲವು ಜನರು ಅವರ ಕಾರಿನ ಗಾಜುಗಳನ್ನು ಕಬ್ಬಿಣದ ಸಲಾಕೆಯಿಂದ ಪುಡಿ ಮಾಡಿದರು ಮತ್ತು ಅವರ ಮೇಲೆ ಗುಂಡು ಹಾರಿಸಿದರು. ಝಾ ಇವರಿಗೆ ೫ ಗುಂಡು ತಗಲಿರುವುದರಿಂದ ಅವರು ಸ್ಥಳದಲ್ಲಿ ಮೃತಪಟ್ಟರು ಹಾಗೂ ಇನ್ನಿಬ್ಬರು ಗಾಯಗೊಂಡರು. ಆರೋಪಿಗಳು ಪರಾರಿಯಾಗಿದ್ದಾರೆ. ರಾಜು ಝಾ ಇವರು ಕಲ್ಲಿದ್ದಲು ವ್ಯಾಪಾರಿಯಾಗಿದ್ದರು. ಈ ಹಿಂದೆ ಅವರನ್ನು ಕಲ್ಲಿದ್ದಲಿನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.