ಇಂದೂರ (ಮಧ್ಯಪ್ರದೇಶ)ನಲ್ಲಿ ದೇವಸ್ಥಾನದ ಬಾವಿಯ ಸ್ಲಾಬ ಕುಸಿದು ಭಕ್ತರು ಬಾವಿಗೆ ಬಿದ್ದರು !

೧೦ ಜನರ ರಕ್ಷಣೆ !

ಇಂದೂರ (ಮಧ್ಯಪ್ರದೇಶ) – ಇಲ್ಲಿಯ ಪಟೇಲ ನಗರದಲ್ಲಿನ ಶ್ರೀ ಬೇಲೇಶ್ವರ ಮಹಾದೇವ ಜೂಲೆಲಾಲ ದೇವಸ್ಥಾನದ ಬಾವಿಯ ಸ್ಲಾಬ್ ಕುಸಿದು ಅದರ ಮೇಲೆ ನಿಂತಿದ್ದ ಭಕ್ತರು ಬಾವಿಗೆ ಬಿದ್ದರು. ನಂತರ ಅಗ್ನಿಶಾಮಕ ದಳ, ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು ಮತ್ತು ಅವರು ಸಹಾಯ ಕಾರ್ಯ ಆರಂಭಿಸಿ ೧೦ ಜನರನ್ನು ಬಾವಿಯಿಂದ ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ. ಮತ್ತು ಇನ್ನೂ ಕೆಲವು ಜನರು ಒಳಗೆ ಇರುವ ಸಾಧ್ಯತೆಯಿದ್ದು ಅವರನ್ನು ಸುರಕ್ಷಿತವಾಗಿ ಹೊರತೆಗೆಯಲು ಪ್ರಯತ್ನ ನಡೆಯುತ್ತಿದೆ.