
ಚಂಡಿಗಡ – ಖಲಿಸ್ತಾನಿ ಸಂಘಟನೆಯಾದ ‘ವಾರಿಸ ಪಂಜಾಬ ದೆ’ಯ (‘ಪಂಜಾಬಿನ ವಾರಸುದಾರ) ಪ್ರಮುಖನಾದ ಅಮೃತಪಾಲ ಸಿಂಹನನ್ನು ಪಂಜಾಬ ಪೊಲೀಸರು ಜಲಂಧರನಲ್ಲಿರುವ ನಕೊದರಾ ಭಾಗದಲ್ಲಿ ಬೆಂಬತ್ತಿ ಬಂಧಿಸಿರುವ ವಾರ್ತೆಯು ಮಾರ್ಚ ೧೮ರಂದು ಎಲ್ಲ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದಕ್ಕೆ ಪೊಲೀಸರು ಅನುಮೋದನೆ ನೀಡಿರಲಿಲ್ಲ ಹಾಗೆಯೇ ನಿರಾಕರಿಸಿಯೂ ಇರಲಿಲ್ಲ. ಆದರೆ ‘ಅಮೃತಪಾಲನನ್ನು ಇಂದಿಗೂ ಬಂಧಿಸಲಾಗಿಲ್ಲ. ಅವನು ಪರಾರಿಯಾಗಿದ್ದು ಪೊಲೀಸರು ಅವನ ಹುಡುಕಾಟದಲ್ಲಿದ್ದಾರೆ, ಎಂದು ಹೇಳಲಾಗುತ್ತಿದೆ. ಆದರೂ ಈ ಬಗ್ಗೆಯೂ ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ. ಇದರಿಂದಾಗಿ ಸಂಶಯಾತ್ಮಕ ಸ್ಥಿತಿ ನಿರ್ಮಾಣವಾಗಿದೆ. ಪಂಜಾಬ ಪೊಲೀಸರು ಇಲ್ಲಿಯ ವರೆಗೆ ಅಮೃತಪಾಲನ ೭೮ ಸಹಚರರನ್ನು ಬಂಧಿಸಿದ್ದಾರೆ. ಅದರೊಂದಿಗೆ ರಾಜ್ಯದಲ್ಲಿನ ಇಂಟರನೆಟ್ ಸೇವೆ ಸ್ಥಗಿತಗೊಳಿಸುವುದರೊಂದಿಗೆ ಅನೇಕ ಭಾಗಗಳಲ್ಲಿ ಕರ್ಫ್ಯೂ ಜ್ಯಾರಿ ಮಾಡಲಾಗಿದೆ. ಪಂಜಾಬ ಪೊಲೀಸರು ‘ಅಮೃತಪಾಲನು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ’ ಎಂದು ಹೇಳಿದ್ದಾರೆ. ಅಮೃತಪಾಲನ ತಂದೆ ತರಸೆಮ ಸಿಂಹರು ‘ನನಗೆ ನನ್ನ ಮಗ ಎಲ್ಲಿ ಇದ್ದಾನೆ ಎಂಬುದೇ ತಿಳಿದಿಲ್ಲ’ ಎಂದು ಹೇಳಿದ್ದಾರೆ. ಪೊಲೀಸರು ಹರಿಯಾಣಾದಲ್ಲಿನ ಗುರುಗ್ರಾಮದಲ್ಲಿ ಅಮೃತಪಾಲನಿಗೆ ಆರ್ಥಿಕ ನರೆವು ನೀಡುತ್ತಿದ್ದ ದಲಜಿತ ಸಿಂಹ ಕಲಸೀಯನ್ನು ಬಂಧಿಸಿದ್ದಾರೆ.
Amritpal Singh: ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಪರಾರಿ: ಪಂಜಾಬ್ನಲ್ಲಿ ಹೈ ಅಲರ್ಟ್#khalistani #amritpalsingh #punjab https://t.co/B5RqXZakaI
— oneindiakannada (@OneindiaKannada) March 19, 2023
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!