|

ರತಲಾಮ (ಮಧ್ಯಪ್ರದೇಶ) – ಇಲ್ಲಿಯ ಶ್ರೀ ಹನುಮಂತನ ಮೂರ್ತಿಯ ಮುಂದೆ ಮಹಿಳೆಯರ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಮಧ್ಯ ಪ್ರದೇಶದಲ್ಲಿನ ಆಡಳಿತಾರೂಢ ಭಾಜಪದ ಕಾರ್ಯಕರ್ತರು ಈ ಸ್ಪರ್ಧೆಯ ಆಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ ಪ್ರಸಾರವಾಗಿರುವ ವಿಡಿಯೋದಲ್ಲಿ ಸ್ಪರ್ಧಿಸಿರುವ ಮಹಿಳೆಯರು ತುಂಡು ಬಟ್ಟೆಯಲ್ಲಿ ಕಾಣುತ್ತಿದ್ದು ಪಕ್ಕದಲ್ಲಿ ಶ್ರೀ ಹನುಮಂತನ ಮೂರ್ತಿ ಕಾಣುತ್ತಿದೆ. ಕಾಂಗ್ರೆಸ್ ನಿಂದ ಈ ಸ್ಪರ್ಧೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಶ್ರೀ ಹನುಮಂತನಿಗೆ ಅವಮಾನ ಮಾಡಿರುವುದೆಂದು ಆರೋಪಿಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ಸಿನ ಕಾರ್ಯಕರ್ತರು ಈ ಸ್ಪರ್ಧೆಯ ನಂತರ ಗಂಗಾಜಲ ಸಿಂಪಡಿಸಿ ಹಾಗೂ ಹನುಮಾನ ಚಾಲಿಸಾದ ಪಠಣೆ ನಡೆಸಿ ವೇದಿಕೆಯ ಶುದ್ದಿ ಕೂಡ ಮಾಡಿದರು.
रतलाम में भगवान हनुमान की मूर्ति रखकर हुई बॅाडी बिल्डिंग प्रतियोगिता
अखिलेश यादव बोले, ‘भाजपाई धार्मिक मूर्तियों का अपमान न करें’
#Ratlam #bodybuilding #AkhileshYadav | Akhilesh Yadav pic.twitter.com/vXlVFga7yy— News24 (@news24tvchannel) March 6, 2023
ಭಾಜಪ ಕ್ಷಮೆ ಯಾಚಿಸಬೇಕು ! – ಕಾಂಗ್ರೆಸ್
ಕಾಂಗ್ರೆಸ್ಸಿನ ಮಾಧ್ಯಮ ಸಲಹೇಗಾರ ಪಿಯುಷ ಬಾಬೇಲೆ ಇವರು ‘ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ್ ಇವರ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿರುವ ಈ ಕಾರ್ಯಕ್ರಮ ‘ಹಿಂದುಗಳ ಮತ್ತು ಭಗವಂತ ಹನುಮಂತನ ಅವಮಾನ ಮಾಡುವುದಾಗಿದೆ’, ಎಂದು ಹೇಳುತ್ತಾ ಭಾಜಪ ಈ ವಿಷಯವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ.
ಕಾಂಗ್ರೆಸ್ಸಿನವರಿಂದ ಮಹಿಳಾ ಸ್ಪರ್ಧಿಗಳ ಮೇಲೆ ವಕ್ರ ದೃಷ್ಟಿ ! – ಭಾಜಪ
ಕಾಂಗ್ರೆಸ್ಸಿನ ಆರೋಪಕ್ಕೆ ಪ್ರತ್ಯುತ್ತರ ನೀಡುವಾಗ ಭಾಜಪದ ವಕ್ತಾರ ಹಿತೇಶ್ ಬಾಜಪೆಯಿ ಇವರು, ‘ಕಾಂಗ್ರೆಸ್ಸಿಗರು ಮಹಿಳೆಯರ ಕುಸ್ತಿ, ಜಿಮ್ನಾಸ್ಟಿಕ್ ಅಥವಾ ಈಜು ಸ್ಪರ್ಧೆ ನೋಡಲು ಇಚ್ಚಿಸುವುದಿಲ್ಲ; ಕಾರಣ ಅದರಿಂದ ಅವರಲ್ಲಿನ ರಾಕ್ಷಸ ಎಚ್ಚೆತ್ತುಕೊಳ್ಳುತ್ತಾನೆ. ಈ ಸ್ಪರ್ಧೆಯಲ್ಲಿನ ಮಹಿಳೆಯರ ಮೇಲೆ ಕಾಂಗ್ರೆಸ್ಸಿನ ವಕ್ರದೃಷ್ಟಿಯಿತ್ತು, ಅವರಿಗೆ ನಾಚಿಕೆಯಾಗಲಿಲ್ಲವೇ ?’, ಎಂದು ಪ್ರತ್ಯಾರೋಪ ಮಾಡಿದರು.
ಸಂಪಾದಕೀಯ ನಿಲುವುದೇವತೆಗಳ ಅವಮಾನ ಆಗದಂತೆ ಕಾಳಜಿ ವಹಿಸುವುದು, ಪ್ರತಿಯೊಂದು ಹಿಂದೂಗಳ ಧರ್ಮ ಕರ್ತವ್ಯವಾಗಿದೆ ! ಈ ದೃಷ್ಟಿಯಿಂದ ಪ್ರತಿಯೊಬ್ಬರು ಜಾಗೃತವಾಗಿರಬೇಕು ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ