ಉಣಟೂರುಕಟ್ಟೆ ಕೈಮರ (ತೀರ್ಥಹಳ್ಳಿ)ದಲ್ಲಿ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂತೆ ಮೇಳದಲ್ಲಿ ಸನಾತನದ ಬಾಲ ಸಾಧಕಿಯ ಸಹಭಾಗ

ಸನಾತನದ ಗ್ರಂಥ ಹಾಗೂ ಸಾತ್ತ್ವಿಕ ಉತ್ಪನ್ನಗಳನ್ನು ವಿತರಿಸುತ್ತಿರುವಾಗ ಕು. ಬಿಂಬಿತಾ

ತೀರ್ಥಹಳ್ಳಿ – ತೀರ್ಥಹಳ್ಳಿ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಉಂಟೂರುಕಟ್ಟೆ ಕೈಮರ ಇಲ್ಲಿ ಮಕ್ಕಳ ಸಂತೆ ಮೇಳವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಾಧಕ ಶ್ರೀ. ಹರೀಶ ಇವರ ಮಗಳಾದ ಕು. ಬಿಂಬಿತಾಳು ಸನಾತನದ ಗ್ರಂಥ ಹಾಗೂ ಸಾತ್ತ್ವಿಕ ಉತ್ಪನ್ನಗಳ ಪ್ರದರ್ಶನವನ್ನು ಏರ್ಪಡಿಸಿದ್ದಳು. ಈ ಮೇಳದಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಪೋಷಕರಿಗೆ ಆಮಂತ್ರಣ ನೀಡಿ ಈ ಮೇಳದಲ್ಲಿ ಖರೀದಿ ಮಾಡಲು ಅವರನ್ನು ಪ್ರೋತ್ಸಾಹಿಸಲಾಯಿತು. ಆದ್ದರಿಂದ ಈ ಮೇಳದಲ್ಲಿ ಹಾಗೂ ಪ್ರದರ್ಶನಕ್ಕೆ ಅಕ್ಕಪಕ್ಕದ ಗ್ರಾಮಸ್ಥರಿಂದ ಅತ್ಯುತ್ತಮ ಸ್ಪಂದನ ವ್ಯಕ್ತವಾಯಿತು. ಈ ಸಮಯದಲ್ಲಿ ಶಾಲೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರೂ ಉಪಸ್ಥಿತರಿದ್ದರು.