ರೀಡಲ್ಸ್ ಇನ್ ಹಿಂದೂಯಿಝಮ್ ಪುಸ್ತಕದಲ್ಲಿ ಡಾ. ಅಂಬೇಡ್ಕರ ಇವರು ಹಿಂದೂಗಳ ಧಾರ್ಮಿಕ ಭಾವನೆ ಧಕ್ಕೆ ತಂದಿರುವ ಆರೋಪ

ನವ ದೆಹಲಿ – ತೆಲಂಗಾಣದಲ್ಲಿ ‘ರಾಷ್ಟ್ರೀಯ ದಲಿತ ಸೇನೆ’ ಹೆಸರಿನ ಸಂಘಟನೆ ನಡೆಸುವ ಮುಖಂಡ ಹಮಾರಾ ಪ್ರಸಾದ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಒಂದು ವಿಡಿಯೋ ಪ್ರಸಾರ ಮಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ ಇವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಹಮಾರಾ ಪ್ರಸಾದ ಇವರು ಈ ವಿಡಿಯೋದಲ್ಲಿ ಡಾ. ಅಂಬೇಡ್ಕರರ ಪುಸ್ತಕ ಕೈಯಲ್ಲಿ ಹಿಡಿದುಕೊಂಡು, ಡಾ. ಅಂಬೇಡ್ಕರ್ ಇವರು ಅವರ ‘ರೀಡಲ್ಸ್ ಇನ್ ಹಿಂದೂಯಿಝಮ್’ (ಹಿಂದೂ ಧರ್ಮದಲ್ಲಿನ ಒಗಟು) ಈ ಪುಸ್ತಕದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಹೇಗೆ ನಥೂರಾಮ ಗೋಡ್ಸೆ ಇವರು ಮ. ಗಾಂಧೀಜಿಯವರನ್ನು ಹತ್ಯೆ ಗೈದರೋ, ಅದೇ ರೀತಿ ನಾನು ಡಾ. ಅಂಬೇಡ್ಕರರಿಗೆ ಗುಂಡು ಹಾರಿಸಿ ಹತ್ಯೆ ಮಾಡುತ್ತಿದ್ದೆ ಎಂದು ಹೇಳಿದರು.
ಹಮಾರಾ ಪ್ರಸಾದ ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಬಹುಜನ ಸಮಾಜ ಪಕ್ಷದ ತೆಲಂಗಾಣ ಶಾಖೆಯ ಮುಖ್ಯಸ್ಥ ಆರ್.ಎಸ್. ಪ್ರವೀಣ ಕುಮಾರ ಇವರು ಈ ವಿಡಿಯೋ ಶೇರ್ ಮಾಡುತ್ತಾ ಪ್ರಸಾದ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept