ಚಲನಚಿತ್ರ ನಿರ್ಮಾಣ ಮಾಡುವಾಗ ಜನರ ಭಾವನೆಗಳಿಗೆ ಪ್ರಾಮುಖ್ಯತೆ ನೀಡಬೇಕು ! – ಯೋಗಿ ಆದಿತ್ಯನಾಥ

ಯೋಗಿ ಆದಿತ್ಯನಾಥ

ದೆಹಲಿ – ಚಲನಚಿತ್ರ ನಟರು ಮತ್ತು ಕಲಾವಿದರನ್ನು ಗೌರವದಿಂದ ಕಾಣುವುದು ಆವಶ್ಯಕವಿದೆ; ಆದರೆ ಚಲನಚಿತ್ರ ನಿರ್ಮಾಣ ಮಾಡುವವಾಗ ನಿರ್ಮಾಪಕರು ಜನರ ಭಾವನೆಗಳನ್ನು ಗೌರವಿಸುವುದು ಕೂಡಾ ಅಷ್ಟೇ ಮಹತ್ವದ್ದಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಹೇಳಿದರು. ಒಂದು ವಾರ್ತಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪತ್ರಕರ್ತರು ಅವರಿಗೆ ಹಿಂದಿ ಚಲನಚಿತ್ರದ ಮೇಲೆ ಬಹಿಷ್ಕಾರ ಹಾಕುವ ಘಟನೆಗಳು ಹೆಚ್ಚು ಆಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಯೋಗಿ ಆದಿತ್ಯನಾಥರು ಮೇಲಿನಂತೆ ಉತ್ತರಿಸಿದರು.