
ನವದೆಹಲಿ – ಅಯೋಧ್ಯೆಯಲ್ಲಿರುವ ಶ್ರೀ ರಾಮಜನ್ಮ ಭೂಮಿಯನ್ನು ‘ಅಯೋಧ್ಯಾ ಬುದ್ಧ ವಿಹಾರ’ ಎಂದು ಘೋಷಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ನ್ಯಾಯಮೂರ್ತಿ ಚಂದ್ರ ಚೂಡರ ಖಂಡಪೀಠದೆದುರಿಗೆ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಆ ಸಂದರ್ಭದಲ್ಲಿ ಖಂಡಪೀಠವು, ‘ನ್ಯಾಯಾಲಯವು 2019ರಲ್ಲಿ ಅಯೋಧ್ಯೆ ಪ್ರಕರಣದ ವಿಷಯದಲ್ಲಿ ತೀರ್ಪು ನೀಡಿದೆ ಇದರಿಂದ ದೂರುದಾರರು ಈ ಅರ್ಜಿಯನ್ನು ಹಿಂಪಡೆಯಬೇಕು. ಇಲ್ಲವಾದರೆ ನ್ಯಾಯಾಲಯ ಅದನ್ನು ರದ್ದು ಗೊಳಿಸುವುದು’ ಎಂದು ಹೇಳಿದೆ. ವಿನೀತ ಮೌರ್ಯ ಹೆಸರಿನ ಅರ್ಜಿದಾರರು ಈ ಅರ್ಜಿಯನ್ನು ದಾಖಲಿಸಿದ್ದರು. ‘ಶ್ರೀ ರಾಮಜನ್ಮ ಭೂಮಿಯ ಸ್ಥಳದಿಂದ ಬೌದ್ಧ ಕಲಾಕೃತಿ ವಶಕ್ಕೆ ಪಡೆಯಲಾಗಿತ್ತು. ಶ್ರೀರಾಮಜನ್ಮ ಭೂಮಿ-ಬಾಬರಿ ಮಸೀದಿಯ ತೀರ್ಪು ನೀಡುವಾಗ ಅಲಹಾಬಾದ್ ಉಚ್ಚ ನ್ಯಾಯಾಲಯವು 2010ರಲ್ಲಿ ನೀಡಿದ ತೀರ್ಪಿನಲ್ಲಿ ಈ ವಿಷಯವನ್ನು ನಮೂದಿಸಿದೆ. ಆದ್ದರಿಂದ ಪ್ರಾಚೀನ ಸ್ಮಾರಕಗಳು, ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳು (ಸುಧಾರಣಾ ಮತ್ತು ಪ್ರಮಾಣೀಕರಣ) ಕಾನೂನಿನ ಕಲಂ 3ಮತ್ತು 4 ಅನ್ವಯ ಈ ಭೂಮಿಯನ್ನು ರಾಷ್ಟ್ರೀಯ ಪುರಾತತ್ವ ಸ್ಥಳವೆಂದು ಘೋಷಿಸಬೇಕು’ ಎಂದು ಮೌರ್ಯರು ಪ್ರತಿವಾದಿಸಿದ್ದರು.
अयोध्या में राम मंदिर के निर्माण क्षेत्र को बुद्ध विहार घोषित करने की मांग से जुड़ी याचिका पर सुनवाई से सुप्रीम कोर्ट ने इनकार किया दिया है. #Ayodhya #RamTemple @Sehgal_Nipun #SupremeCourt https://t.co/jhVbEM5XYK
— ABP News (@ABPNews) February 3, 2023
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ