
ನವದೆಹಲಿ – ಅಯೋಧ್ಯೆಯಲ್ಲಿರುವ ಶ್ರೀ ರಾಮಜನ್ಮ ಭೂಮಿಯನ್ನು ‘ಅಯೋಧ್ಯಾ ಬುದ್ಧ ವಿಹಾರ’ ಎಂದು ಘೋಷಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ನ್ಯಾಯಮೂರ್ತಿ ಚಂದ್ರ ಚೂಡರ ಖಂಡಪೀಠದೆದುರಿಗೆ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಆ ಸಂದರ್ಭದಲ್ಲಿ ಖಂಡಪೀಠವು, ‘ನ್ಯಾಯಾಲಯವು 2019ರಲ್ಲಿ ಅಯೋಧ್ಯೆ ಪ್ರಕರಣದ ವಿಷಯದಲ್ಲಿ ತೀರ್ಪು ನೀಡಿದೆ ಇದರಿಂದ ದೂರುದಾರರು ಈ ಅರ್ಜಿಯನ್ನು ಹಿಂಪಡೆಯಬೇಕು. ಇಲ್ಲವಾದರೆ ನ್ಯಾಯಾಲಯ ಅದನ್ನು ರದ್ದು ಗೊಳಿಸುವುದು’ ಎಂದು ಹೇಳಿದೆ. ವಿನೀತ ಮೌರ್ಯ ಹೆಸರಿನ ಅರ್ಜಿದಾರರು ಈ ಅರ್ಜಿಯನ್ನು ದಾಖಲಿಸಿದ್ದರು. ‘ಶ್ರೀ ರಾಮಜನ್ಮ ಭೂಮಿಯ ಸ್ಥಳದಿಂದ ಬೌದ್ಧ ಕಲಾಕೃತಿ ವಶಕ್ಕೆ ಪಡೆಯಲಾಗಿತ್ತು. ಶ್ರೀರಾಮಜನ್ಮ ಭೂಮಿ-ಬಾಬರಿ ಮಸೀದಿಯ ತೀರ್ಪು ನೀಡುವಾಗ ಅಲಹಾಬಾದ್ ಉಚ್ಚ ನ್ಯಾಯಾಲಯವು 2010ರಲ್ಲಿ ನೀಡಿದ ತೀರ್ಪಿನಲ್ಲಿ ಈ ವಿಷಯವನ್ನು ನಮೂದಿಸಿದೆ. ಆದ್ದರಿಂದ ಪ್ರಾಚೀನ ಸ್ಮಾರಕಗಳು, ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳು (ಸುಧಾರಣಾ ಮತ್ತು ಪ್ರಮಾಣೀಕರಣ) ಕಾನೂನಿನ ಕಲಂ 3ಮತ್ತು 4 ಅನ್ವಯ ಈ ಭೂಮಿಯನ್ನು ರಾಷ್ಟ್ರೀಯ ಪುರಾತತ್ವ ಸ್ಥಳವೆಂದು ಘೋಷಿಸಬೇಕು’ ಎಂದು ಮೌರ್ಯರು ಪ್ರತಿವಾದಿಸಿದ್ದರು.
अयोध्या में राम मंदिर के निर्माण क्षेत्र को बुद्ध विहार घोषित करने की मांग से जुड़ी याचिका पर सुनवाई से सुप्रीम कोर्ट ने इनकार किया दिया है. #Ayodhya #RamTemple @Sehgal_Nipun #SupremeCourt https://t.co/jhVbEM5XYK
— ABP News (@ABPNews) February 3, 2023
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ