ಗಣರಾಜ್ಯೋತ್ಸವದ ದಿನದಂದು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಎನ್‌.ಸಿ.ಸಿ.ಯ ವಿದ್ಯಾರ್ಥಿಗಳಿಂದ ‘ಅಲ್ಲಾಹು ಅಕ್ಬರ್.’ ನ ಘೋಷಣೆ !

(ಎನ್‌.ಸಿ.ಸಿ. ಎಂದರೆ ನ್ಯಾಷನಲ್ ಕೆಡೆಟ್ ಕಾರ್ಪ್ಸ್)
(ಅಲ್ಲಾಹು ಅಕ್ಬರ್ ಎಂದರೆ ಅಲ್ಲ ಮಹಾನ ಇರುವನು )

ಅಲಿಗಡ (ಉತ್ತರಪ್ರದೇಶ) – ಇಲ್ಲಿಯ ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಜನವರಿ ೨೬ ರಂದು ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಮಾಡುವಾಗ ಎನ್.ಸಿ.ಸಿ.’ಯ (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಮುಸಲ್ಮಾನ ವಿದ್ಯಾರ್ಥಿಗಳು ‘ಅಲ್ಲಾಹು ಅಕ್ಬರ್’ (ಅಲ್ಲ ಮಹಾನ ಇರುವನು) ಮತ್ತು ‘ನಾರಾ-ಎ-ತಕಬಿರ್’(ಅಲ್ಲಾ ಎಲ್ಲಕ್ಕಿಂತ ದೊಡ್ಡವನು) ಈ ರೀತಿ ಘೋಷಣೆ ನೀಡಿದರು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

೧. ವಿಶ್ವವಿದ್ಯಾಲಯದ ವಸೀಮ ಅಲಿ ಇವರು, ವಿಡಿಯೋದ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಲಾಗುತ್ತದೆ. ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವುದು. ಈ ಘಟನೆಯ ಸಮಯದಲ್ಲಿ ವಿಶ್ವವಿದ್ಯಾಲಯದ ಕುಲಪತಿ ತಾರೀಕ ಮನ್ಸೂರ್ ಇವರು ಕೂಡ ವಿದ್ಯಾರ್ಥಿಗಳಿಂದ ಸ್ವಲ್ಪವೇ ದೂರದಲ್ಲಿ ಉಪಸ್ಥಿತರಿದ್ದರು. (ಕುಲಪತಿ ಉಪಸ್ಥಿತಿ ಇರುವಾಗ ಈ ರೀತಿಯ ಘೋಷಣೆ ನೀಡಿದರು ಕೂಡ ಕುಲಪತಿ ಅವರನ್ನು ತಡೆಯುವುದಿಲ್ಲ, ಇದನ್ನು ತಿಳಿದುಕೊಳ್ಳಿ ! ಇಂತಹ ವಿಶ್ವವಿದ್ಯಾಲಯದ ಮುಸಲ್ಮಾನ ವಿದ್ಯಾರ್ಥಿಗಳು ಏನು ಕಲಿಯುತ್ತಿರಬಹುದು, ಮತ್ತು ಮುಂದೆ ಇವರು ಏನು ಮಾಡುವರು ? ಇದು ಇದರಿಂದ ತಿಳಿಯುತ್ತದೆ. ಇಂತಹ ವಿಶ್ವವಿದ್ಯಾಲಯಗಳು ಈಗ ಮುಚ್ಚುವುದೇ ಅವಶ್ಯಕವಾಗಿದೆ ! – ಸಂಪಾದಕರು)

೨. ಇದರ ಬಗ್ಗೆ ಈ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಮತ್ತು ಭಾಜಪದ ನಾಯಕ ಡಾ. ನಿತೀಶ ಶರ್ಮಾ ಇವರು ಅಲಿಗಡ ಪೊಲೀಸ್ ಮತ್ತು ವಿಶೇಷ ಪೊಲೀಸ ಅಧಿಕಾರಿ ಕಲಾನಿಧಿ ನೈಥಾನಿ ಇವರ ಬಳಿ ದೂರು ನೀಡಿದರು. ಇದರಲ್ಲಿ ಅವರು, ಗಣರಾಜ್ಯೋತ್ಸವ ದಿನದಂದು ಮತಾಂಧರು ಘೋಷಣೆ ನೀಡುವ ಹಿಂದಿನ ಅರ್ಥವೇನು ? ಈ ಧಾರ್ಮಿಕ ಘೋಷಣೆಯು ಅವರ ವಿಚಾರಧಾರೆ ತೋರಿಸುತ್ತದೆ. ಇಂತಹ ಘೋಷಣೆ ನೀಡಿ ಅವರು ಯಾವ ಸಂದೇಶ ನೀಡಲು ಬಯಸುತ್ತಾರೆ ? ಸಂಪೂರ್ಣ ದೇಶ ಭಾರತೀಯ ಸಂವಿಧಾನದ ಎದುರು ತಲರಬಾಗಿದೆ. ಆದ್ದರಿಂದ ಈ ರೀತಿಯ ಘೋಷಣೆಯಿಂದ ಭಾರತದಲ್ಲಿ ಮತಭೇದ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿಯ ಘೋಷಣೆ ಹೇಗೆ ನೀಡಿದರು ? ಮತ್ತು ಅವರ ಹಿಂದೆ ಯಾವ ವಿಚಾರಧಾರೆ ಇದೆ ? ಅದರ ತನಿಖೆ ನಡೆಯಬೇಕು. ಪೊಲೀಸರು ಈ ಪ್ರಕರಣದ ದೂರು ಪಡೆದು ಅಗತ್ಯವಿರುವ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಎನ್.ಸಿ.ಸಿ. ಯ ವಿದ್ಯಾರ್ಥಿಗಳು ಮುಂದೆ ಸೈನ್ಯದಲ್ಲಿ ಪ್ರವೇಶ ಪಡೆಯುತ್ತಾರೆ ಅಥವಾ ಅರೆ ಸೇನಾಪಡೆಯಲ್ಲಿ ಕೂಡ ಪ್ರವೇಶ ಪಡೆಯುತ್ತಾರೆ. ಅಲ್ಲಿ ಈ ವಿದ್ಯಾರ್ಥಿಗಳು ಏನಾದರೂ ಪ್ರವೇಶ ಪಡೆದರೆ ಯಾವ ರೀತಿಯ ಕೆಲಸ ಮಾಡಬಹುದು ಎಂಬುದು ಗಮನಕ್ಕೆ ಬರುತ್ತದೆ. ಆದ್ದರಿಂದ ಇಂತಹವರಿಗೆ ಈಗ ಈ ಶಿಕ್ಷಣ ನೀಡಬೇಕೇ ? ಇದರ ಯೋಚನೆ ಮಾಡುವುದು ಅವಶ್ಯಕವಾಗಿದೆ !