
ಇಂದೂರ (ಮಧ್ಯಪ್ರದೇಶ) – ರಾಜ್ಯದ ಇಂದೂರ, ಮಹು ಮತ್ತು ದೇವಾಸ್ ಇಲ್ಲಿ ಮುಸಲ್ಮಾನರು ಪಠಾಣ ಚಲನಚಿತ್ರವನ್ನು ಬೆಂಬಲಿಸುವಾಗ ‘ಸರ್ ತನ್ ಸೇ ಜುದಾ’ (ಶಿರಚ್ಛೇದ ಮಾಡುವುದು) ‘ಅಲ್ಲಾಹು ಅಕಬರ’ (ಅಲ್ಲಾ ಮಹಾನ ಆಗಿರುವನು) ಎಂದು ಘೋಷಣೆ ನೀಡಿದರು. ಈ ಕುರಿತಾದ ವಿಡಿಯೋ ಕೂಡ ಬೆಳಕಿಗೆ ಬಂದಿದೆ. ಇಂದೂರನ ಬಾರವಾಲಿ ಚೌಕಿಯಲ್ಲಿ ಈ ಘೋಷಣೆ ನೀಡುವಾಗ ಚಿಕ್ಕ ಹುಡುಗರು ಕೂಡ ಸಹಭಾಗಿ ಆಗಿದ್ದರು. ಖಜರಾನಾ ಇಲ್ಲಿ ಮುಸಲ್ಮಾನರು ರಸ್ತೆ ತಡೆ ನಡೆಸಿದರು. ಹಾಗೂ ಕೆಲವು ಹಿಂದೂಗಳಿಗೆ ಥಳಿಸಿದರು. ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಲ ಇವರು ಈ ವಿಷಯದ ಎರಡು ವಿಡಿಯೋ ಟ್ವಿಟರ್ ನಲ್ಲಿ ಪ್ರಸಾರ ಮಾಡಿದ್ದಾರೆ. ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ್ ಮತ್ತು ಗೃಹ ಸಚಿವ ನರೋತ್ತಮ ಮಿಶ್ರ ಇವರಿಗೆ ‘ಟ್ಯಾಗ್’ ಮಾಡಿದ್ದಾರೆ. ಅವರು, ದೇಶದಲ್ಲಿ ಎಲ್ಲಕ್ಕಿಂತ ಸ್ವಚ್ಛವಾದ ನಗರದಲ್ಲಿ ಕೂಡ ಜಿಹಾದಿ ಕಸದ ರಾಶಿ ಇದೆ. ಬಹುಶಃ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಹ ಅಥವಾ ಗೃಹ ಸಚಿವ ನರೋತ್ತಮ ಮಿಶ್ರ ಇವರಿಗೆ ತಿಳಿದಿಲ್ಲ, ಅವರ ಇಂದೂರಿನಲ್ಲಿ ಕೂಡ ‘ಸರ ತನ ಸೇ ಜುದಾ’ದ ಗುಂಪು ಸಕ್ರಿಯ ಇರುವುದು. ಇಂದೇ ಇದರ ಹೆಡೆಮುರಿ ಕಟ್ಟುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ