
ಕೊಲಕಾತಾ – `ವಂದೇ ಭಾರತ’ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟದ ಘಟನೆ ಬೆಳಕಿಗೆ ಬಂದಿದೆ. ಬಂಗಾಲದಲ್ಲಿ ಒಂದು ವಾರದಲ್ಲಿ ಈ ರೈಲಿನ ಮೇಲೆ ಕಲ್ಲು ತೂರಾಟದ ೩ ನೇ ಘಟನೆಯಾಗಿದೆ. ಬಾರೋಸಯಿ ರೈಲು ನಿಲ್ದಾಣದ ಬಳಿ `ವಂದೇ ಭಾರತ’ ಎಕ್ಸಪ್ರೆಸ್ಸಿನ ಸಿಸೀ-೧೪ ಭೋಗಿಯ ಮೇಲೆ ಕಲ್ಲುತೂರಾಟ ಮಾಡಲಾಗಿದೆ. ಇದರಿಂದ ಕಿಟಕಿಯ ಗಾಜು ಒಡೆಯಿತು. ಈ ಘಟನೆಯಿಂದ ರೈಲು ಬೋಲಪುರ ನಿಲ್ದಾಣದಲ್ಲಿ ಬಹಳ ಸಮಯ ನಿಲ್ಲಿಸಬೇಕಾಯಿತು. ಅದೃಷ್ಟವಶಾತ್ ಈ ಕಲ್ಲುತೂರಾಟದಲ್ಲಿ ಯಾವುದೇ ಪ್ರಯಾಣಿಕರಿಗೆ ಅಪಾಯ ಆಗಲಿಲ್ಲ. ಡಿಸೆಂಬರ್ ೩೦, ೨೦೨೨ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಂಗಾಲದಲ್ಲಿ `ವಂದೇ ಭಾರತ’ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಅದರ ನಂತರ ಜನವರಿ ೨ ರಂದು ರಾತ್ರಿ ಮಲದಾ ಇಲ್ಲಿ ಈ ರೈಲಿನ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಅದರ ನಂತರ ಜನವರಿ ೩ ರಂದು ಕಿಶನಗಂಜ ಇಲ್ಲಿ ಈ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಬಂಗಾಲದಲ್ಲಿನ ವಿರೋಧಿ ಪಕ್ಷದ ಮುಖಂಡರು ಮತ್ತು ಭಾಜಪದ ನಾಯಕ ಶುಭೆಂದು ಅಧಿಕಾರಿ ಇವರು ಈ ಘಟನೆಯನ್ನು ರಾಷ್ಟ್ರೀಯ ತನಿಖಾ ದಳದಿಂದ ವಿಚಾರಣೆ ನಡೆಸಲು ಆಗ್ರಹಿಸಿದ್ದರು.
Bengal: #VandeBharat Express pelted with stone again, train operations disrupted.#ITVideo pic.twitter.com/SXn58VHjoF
— IndiaToday (@IndiaToday) January 9, 2023
ಸಂಪಾದಕೀಯ ನಿಲುವುದುಷ್ಕರ್ಮಿಗಳಿಂದ ಪದೇ ಪದೇ ರೈಲಿನ ಮೇಲೆ ಕಲ್ಲು ತೂರಾಟ ನಡೆಯುತ್ತಿರುವಾಗ ಕ್ರಮ ಕೈಗೊಳ್ಳದ ತೃಣಮೂಲ ಕಾಂಗ್ರೆಸ್ಸಿನ ರಾಜ್ಯದ ಪೊಲೀಸರು ! ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದರಿಂದ ಈಗ ಜನರಿಗೆ ರೈಲು ಪ್ರಯಾಣ ಮಾಡುವುದು ಕೂಡ ಕಠಿಣವಾಗಿದೆ. ಇದೇ ಇದರಿಂದ ತಿಳಿದು ಬರುತ್ತದೆ. |
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !
ಸ್ವಂತ ಪಕ್ಷ ಸ್ಥಾಪಿಸಲು ಮುಂದಾದ ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ!
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!