ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ಕನ್ನಡ ಭಾಷೆಯಲ್ಲಿ ಸಾಧನೆ ಶಿಬಿರ ಆರಂಭ

ದೀಪಪ್ರಜ್ವಲನೆಯನ್ನು ಮಾಡುತ್ತಿರುವಾಗ ಶ್ರೀ. ಶಿವನ ಗೌಡ ಬರಮಗೌಡರ ಮತ್ತು ಸೌ. ಮಂಜುಳ ರಮಾನಂದ ಗೌಡ

ರಾಮನಾಥಿ (ಗೋವಾ) – ಸನಾತನ ಸಂಸ್ಥೆಯ ವತಿಯಿಂದ ಇಲ್ಲಿಯ ಸನಾತನದ ಆಶ್ರಮದ ಚೈತನ್ಯಮಯ ವಾತಾವರಣದಲ್ಲಿ ಜನವರಿ 6, 2023 ರಂದು ಕನ್ನಡ ಭಾಷೆಯಲ್ಲಿನ ಸಾಧನೆ ಶಿಬರವು ಆರಂಭವಾಯಿತು. ಶಿಬಿರದ ಆರಂಭದಲ್ಲಿ ಶಂಖನಾದ ಮಾಡಲಾಯಿತು. ತದನಂತರ ಬಾಗಲಕೋಟೆಯ ಹಿತಚಿಂತಕರಾದ ಶ್ರೀ. ಶಿವನಗೌಡ ಬರಮಗೌಡರ (ಆಧ್ಯಾತ್ಮಿಕ ಮಟ್ಟ ಶೇ. 63) ಮತ್ತು ಸನಾತನದ ಸಾಧಕಿ ಸೌ. ಮಂಜುಳ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. 66) ಇವರ ಹಸ್ತದಿಂದ ದೀಪ ಪ್ರಜ್ವಲನೆ ಮಾಡಲಾಯಿತು. ಈ ಶಿಬಿರದಲ್ಲಿ ಕರ್ನಾಟಕ ರಾಜ್ಯದ ಜಿಜ್ಞಾಸುಗಳು ಮತ್ತು ಹಿತಚಿಂತಕರು ಸಹಭಾಗಿಯಾಗಿದ್ದಾರೆ.