`ಅಯೋಧ್ಯೆಯಲ್ಲಿ ಕಟ್ಟಲಾಗುತ್ತಿರುವ ಶ್ರೀ ರಾಮ ಮಂದಿರ ಕೆಡವಿ ಬಾಬ್ರಿ ಮಸೀದಿ ಕಟ್ಟುವೆವು ! (ಅಂತೆ)

ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿರುವ ಅಲ್ ಕಾಯ್ದಾದಿಂದ ಬೆದರಿಕೆ !

ನವದೆಹಲಿ – `ಅಲ್ ಕಾಯ್ದಾ’ ಈ ಕುಖ್ಯಾತ ಜಿಹಾದಿ ಭಯೋತ್ಪಾದಕ ಸಂಘಟನೆಯು ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಕಟ್ಟಲಾಗುತ್ತಿರುವ ಭವ್ಯ ಶ್ರೀರಾಮ ಮಂದಿರ ಧ್ವಂಸಗೊಳಿಸುವ ಬೆದರಿಕೆ ನೀಡಿದೆ. ಅಲ್ ಕಾಯ್ದಾವು `ಗಜವಾ-ಏ-ಹಿಂದ’ (ಭಾರತದ ವಿನಾಶ) ಈ ನಿಯಕಾಲಿಕೆಯ ಡಿಸೆಂಬರನ ಸಂಚಿಕೆಯಲ್ಲಿ `ಶ್ರೀರಾಮ ಮಂದಿರ ಧ್ವಂಸಗೊಳಿಸಿ ಅಲ್ಲಿ ಭವ್ಯ ಬಾಬ್ರಿ ಮಸೀದಿ ಕಟ್ಟುವೆವು’ ಎಂದು ಹೇಳಿದೆ. ಭಾರತೀಯ ಮುಸಲ್ಮಾನರು `ಜಿಹಾದ’ಗೆ ಬೆಂಬಲ ನೀಡುವಂತೆ ಕರೆ ನೀಡಿದೆ. ಈ ನಿಯತಕಾಲಿಕೆ ೨೦೦೨ ರ ಗುಜರಾತ ದಂಗೆಯ ಉಲ್ಲೇಖ ಕೂಡ ಮಾಡಿದೆ.

೧.ನಿಯತಕಾಲಿಕೆಯಲ್ಲಿ, ಬಾಬ್ರಿ ಮಸೀದಿಯ ಅಡಿಪಾಯದಲ್ಲಿ ಕಟ್ಟಲಾಗುತ್ತಿರುವ ಶ್ರೀ ರಾಮ ಮಂದಿರದ ಧ್ವಂಸಗೊಳಿಸಿ ಮೂರ್ತಿಯ ಜಾಗದಲ್ಲಿ ಅಲ್ಲಾನ ಹೆಸರಿನಲ್ಲಿ ಮತ್ತೆ ಬಾಬ್ರಿ ಮಸೀದಿ ಕಟ್ಟಲಾಗುವುದು. ಮುಸಲ್ಮಾನರು ಇಲ್ಲಿಯವರೆಗೆ ಬಹಳ ಸಹಿಸಿಕೊಂಡಿದ್ದಾರೆ. ಆದ್ದರಿಂದ ಈಗ ಅವರು ಯಾವುದೇ ರೀತಿಯ ಹಾನಿಗೆ ಹೆದರಬಾರದು. ಪ್ರಾಣ ಮತ್ತು ಹಣ ಇದರ ಉಪಯೋಗ ಜಿಹಾದಿಗಾಗಿ ಮಾಡಿದ್ದರೆ ಇಷ್ಟೊಂದು ಹಾನಿ ಆಗುತ್ತಿರಲಿಲ್ಲ ಎಂದು ಹೇಳಿದೆ.

೨. ಸಂಪೂರ್ಣ ಭಾರತೀಯ ಉಪಖಂಡ ಇಸ್ಲಾಂನ ಭಾಗವಾಗಬೇಕು ಮತ್ತು ಮೂರ್ತಿ ಪೂಜೆ ನಿಲ್ಲಬೇಕು, ಇದಕ್ಕಾಗಿ ಅಲ್ ಕಾಯ್ದಾದ ಜಿಹಾದಿ ಹೋರಾಟದ ಉದ್ದೇಶವಾಗಿದೆ ಎಂದು ಕೂಡ ಇದರಲ್ಲಿ ಹೇಳಲಾಗಿದೆ.

೩. ಈ ನಿಯತಕಾಲಿಕೆಯಲ್ಲಿ ಮುಂದೆ, ಜಾತ್ಯತೀತತೆ ಭಾರತೀಯ ಮುಸಲ್ಮಾನರಿಗೆ ನರಕವಾಗಿದೆ, ಹಾಗೂ `ಹಿಂದೂ ಮತ್ತು ಮುಸಲ್ಮಾನ ಸಹೋದರತ್ವ’ದ ಘೋಷಣೆ ಇದು ಒಂದು ರೀತಿಯ ಮೋಸವಾಗಿದೆ. (ಸರ್ವಧರ್ಮಸಮಭಾವ ಎಂದು ಹೇಳುವವರಿಗೆ ಕಪಾಳ ಮೋಕ್ಷ ! – ಸಂಪಾದಕರು) ಎಂದು ಹೇಳಲಾಗಿದೆ.

`ಹಿಂದೂಗಳಿಗೆ ಲಾಠಿ ಉಪಯೋಗಿಸಲು ಕಲಿಸುವುದರ ಜೊತೆಗೆ ಶಸ್ತ್ರಗಳನ್ನು ಹರಿತ ಮಾಡಲಾಗುತ್ತಿದೆ !’ (ಅಂತೆ)

ಈ ನಿಯತಕಾಲಿಕೆಯಲ್ಲಿ ಗುಜರಾತ್ ನ ಗಲಭೆಯನ್ನು ಉಲ್ಲೇಖಿಸುತ್ತಾ, ೩೦ ವರ್ಷಗಳ ಹಿಂದೆ ಬಾಬ್ರಿ ಮಸೀದಿ ನೆಲಸಮ ಮಾಡಲಾಯಿತು. ೨೦ ವರ್ಷಗಳ ಹಿಂದೆ (ಗುಜರಾತ ದಂಗೆಯ ಸಮಯದಲ್ಲಿ) ಗರ್ಭಿಣಿ ಮಹಿಳೆಯರ ಹೊಟ್ಟೆ ಹರಿದು ಮಗುವನ್ನು ಕೊಲ್ಲಲಾಯಿತು. ಇಂದು ಎಲ್ಲಾ ಕಡೆ ಬುಲ್ಡೋಜರ್ ನಡೆಸಲಾಗುತ್ತಿದೆ. ಎಲ್ಲಾ ಹಿಂದೂಗಳಿಗೆ ಲಾಟಿ ಉಪಯೋಗಿಸಲು ಕಲಿಸಲಾಗುತ್ತಿದೆ. ತರಕಾರಿ ಹೆಚ್ಚಲು ಉಪಯೋಗಿಸುವ ಚಾಕುವನ್ನು ಮುಸಲ್ಮಾನರ ಮುಖ ಮತ್ತು ತಲೆಯನ್ನು ಕತ್ತರಿಸುವ ಬಗ್ಗೆ ಹಿಂದೂ ಮಹಿಳೆಯರ ಬಾಯಿಂದ ಬರುತ್ತಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಅಲಿಗಡ; ಜಾಮಿಯಾ ಉಸ್ಮಾನಿಯಾ, ಭಾಗ್ಯನಗರ ಮತ್ತು ದೇವಬಂದ ಇಲ್ಲಿಯ ಪ್ರತಿಯೊಬ್ಬರೂ ಮುಸಲ್ಮಾನನ ವಿರುದ್ಧ ಹಿಂದೂಗಳು ಚಾಕು, ಈಟಿಗಳು ಮತ್ತು ಖಡ್ಗಗಳನ್ನು ಹರಿತ ಗೊಳಿಸುತ್ತಿದ್ದಾರೆ.
(ಜಿಹಾದಿಗಳು ಏಕೆ ೪೭ ರೈಫಲ್ ನಡೆಸುವ, ಬಾಂಬ್ ಎಸೆಯುವ, ಶಸ್ತ್ರ ಉಪಯೋಗಿಸುವ, ಹಾಗೂ ಹಿಂದೂಗಳ ತಲೆ ಕತ್ತರಿಸುವ ಪ್ರಶಿಕ್ಷಣ ನೀಡಲಾಗುತ್ತಿದೆ, ಅದೇನು ಸತ್ಯಾಗ್ರಹ ಮಾಡುವುದಕ್ಕಾಗಿ, ಎಂದು ಅಲ್ ಕಾಯ್ದಾಗೆ ಹೇಳುವುದಿದೆಯೇ ? ಹಿಂದೂಗಳ ಮೇಲೆ ಈ ರೀತಿ ಆರೋಪ ಮಾಡಿ ಭಾರತದಲ್ಲಿನ ಮುಸಲ್ಮಾನರಿಗೆ ಶಸ್ತ್ರಗಳನ್ನು ಇಟ್ಟುಕೊಳ್ಳಲು ಪ್ರಚೋದನೆ ನೀಡುವ ಅಲ್ ಕಾಯ್ದಾದ ಈ ನಿಯತಕಾಲಿಕೆ ದೇಶಾದ್ಯಂತ ಪ್ರಸಾರವಾಗದಂತೆ ಸರಕಾರ ನಿಗಾವಹಿಸುವುದು ಅವಶ್ಯಕವಾಗಿದೆ ! – ಸಂಪದಕರು)

ಸಂಪಾದಕೀಯ ನಿಲುವು

`ಅಲ್ ಕಾಯ್ದಾ’ ಈಗ ತನ್ನ ಕೊನೆ ಕ್ಷಣವನ್ನು ಏದುರು ನೋಡುತ್ತಿದೆ, ಇಂತಹ ಸಮಯದಲ್ಲಿ ಸಂಘಟನೆಗೆ ಮತ್ತೆ ಜೀವ ತುಂಬಲು ಈ ರೀತಿಯ ಹೇಳಿಕೆ ನೀಡಿ ಮುಸಲ್ಮಾನರನ್ನು ತಮ್ಮ ಕಡೆಗೆ ಹೊರಳಿಸಲು ಮತ್ತು `ನಾವು ಇನ್ನೂ ಕೂಡ ಮುಸಲ್ಮಾನರ ರಕ್ಷಕರಾಗಿದ್ದೇವೆ’, ಎಂದು ತೋರಿಸುವ ದಯನೀಯ ಪ್ರಯತ್ನ ಮಾಡುತ್ತಿದೆ, ಇದು ಇದರಿಂದ ಸ್ಪಷ್ಟವಾಗುತ್ತದೆ !

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟುವುದು ಅಷ್ಟೇ ಅಲ್ಲದೆ ಅದಕ್ಕೆ ೨೪ ಗಂಟೆಗಳ ಕಾಲ ರಕ್ಷಣೆ ನೀಡುವುದು ಅವಶ್ಯಕವಾಗಿದೆ, ಇದೆ ಈ ಬೆದರಿಕೆಯಿಂದ ಸ್ಪಷ್ಟವಾಗುತ್ತದೆ !

`ಜಿಹಾದಿ ಭಯೋತ್ಪಾದಕರಿಗೆ ಧರ್ಮ ಇರುವುದಿಲ್ಲ’ ಎಂದು ಹೇಳುವ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಈಗ ಎಲ್ಲಿ ಅಡಗಿ ಕುಳಿತಿದ್ದಾರೆ ?