
ಕರ್ಣಾವತಿ (ಗುಜರಾತ) – ನಟ ಶಾಹರುಖ್ ಖಾನ್ ನ `ಪಠಾಣ’ ಚಲನಚಿತ್ರಕ್ಕೆ ಕಳೆದ ಕೆಲವು ದಿನಗಳಿಂದ ವಿರೋಧ ವ್ಯಕ್ತವಾಗುತ್ತದೆ. ಈ ಹಿನ್ನಲೆಯಲ್ಲಿ ಬಜರಂಗ ದಳದ ಕಾರ್ಯಕರ್ತರು ಕರುಣಾವತಿ ನಗರದ `ಅಲ್ಪಾವನ್’ ಮಾಲ್ ನಲ್ಲಿ (ಮಾಲ್ ಎಂದರೆ ದೊಡ್ಡ ವ್ಯಾಪಾರಿ ಸಂಕುಲ) ಅಂಟಿಸಿದ್ದ ಚಲನಚಿತ್ರದ ಪೋಸ್ಟರ್ ಗಳನ್ನು ಹರಿದರು. ಈ ಸಮಯದಲ್ಲಿ ಮಾಲ್ ಗೆ ಹಾನಿಯನ್ನುಂಟುಮಾಡಿದರು. `ಪಠಾಣ’ ಚಲನಚಿತ್ರ ಪ್ರದರ್ಶನವಾಗಲು ಬಿಡುವುದಿಲ್ಲ’, ಎಂದು ಈ ಸಮಯದಲ್ಲಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು. ಪೊಲೀಸರು ಅಲ್ಲಿಗೆ ತಲುಪಿದ ನಂತರ ೫ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಬಜರಂಗದಳದ ಅಧ್ಯಕ್ಷ ಜ್ವಲಿತ ಮೆಹತಾ ಇವರು, ನಟಿ ದೀಪಿಕಾ ಪಡುಕೋಣೆ ಇವರು ಧರಿಸಿದ್ದ ಬಟ್ಟೆಗೆ ನಮ್ಮ ವಿರೋಧವಿದೆ. `ಪಠಾಣ’ ಚಲನಚಿತ್ರ `ಲವ್ ಜಿಹಾದ್’ ಗೆ ಪ್ರೋತ್ಸಾಹ ನೀಡುತ್ತಿದೆ. ಆದ್ದರಿಂದ ನಾವು ಈ ಚಲನಚಿತ್ರ ಪ್ರದರ್ಶನಗೊಳ್ಳಲು ಬಿಡುವುದಿಲ್ಲ, ಎಂದು ಹೇಳಿದರು.
#WATCH | Gujarat | Bajrang Dal workers protest against the promotion of Shah Rukh Khan’s movie ‘Pathaan’ at a mall in the Karnavati area of Ahmedabad (04.01)
(Video source: Bajrang Dal Gujarat’s Twitter handle) pic.twitter.com/NelX45R9h7
— ANI (@ANI) January 5, 2023
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!