
ಹಜಾರಿಬಾಗ(ಝಾರಖಂಡ) – ಇಲ್ಲಿಯ ಬರಿಯಠ ಬಿರಹೋರ ಟೋಲಾ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಆದಿವಾಸಿ ಜನರಿಗೆ ಶಸ್ತ್ರಗಳಿಂದ ಹೆದರಿಸಿ ಗೋಮಾಂಸವನ್ನು ತಿನ್ನಿಸಲಾಯಿತು. ಅವರ ಮತಾಂತರ ಮಾಡುವ ಪ್ರಯತ್ನವನ್ನು ಕೂಡ ಮಾಡಲಾಯಿತು. ಈ ಪ್ರಕರಣದಲ್ಲಿ ಮನೋಜ ಬಿರಹೋರನು ಪೊಲೀಸರಲ್ಲಿ ದೂರು ಮಾಡಿದ ಬಳಿಕ ದೂರು ದಾಖಲಿಸಲಾಯಿತು. ತದನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದರು.
Jharkhand: Hindu man stripped, assaulted by Mithun Shaikh and 4 others for refusing to eat beefhttps://t.co/EBMFSUAFDd
— OpIndia.com (@OpIndia_com) January 2, 2023
೧. ಈ ದೂರಿನಲ್ಲಿ, ಡಿಸೆಂಬರ 30 ರಂದು ಈ ಪ್ರದೇಶದಲ್ಲಿ ಖಲೀಲ ಮಿಯಾ ಹೆಸರಿನ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ತಲುಪಿದ್ದಳು. ಅಲ್ಲಿ ಡಿಸೆಂಬರ 31 ರ ರಾತ್ರಿ ನೀಡಿದ ಔತಣಕೂಟದಲ್ಲಿ ಕೆಲವು ಜನರಿಗೆ ಮದ್ಯ ಕುಡಿಸಲಾಯಿತು. ತದನಂತರ ಅವರಿಗೆ ಊಟವನ್ನು ನೀಡಲಾಯಿತು. ಈ ಮಾಂಸಾಹಾರ ಊಟವನ್ನು ನೋಡಿ ಅವರಿಗೆ ಗೋಮಾಂಸ ಇರುವ ಸಂದೇಹ ಬಂದಿತು. ಅವರು ವಿರೋಧಿಸಲು ಪ್ರಯತ್ನಿಸಿದಾಗ ಅವರಿಗೆ ಶಸ್ತ್ರಗಳಿಂದ ಹೆದಿರಿಸಿ ಮಾಂಸವನ್ನು ತಿನ್ನಿಸಿದರು.
೨. ಸಾಹಿಬಗಂಜನ ರಾಧಾನಗರ ಪ್ರದೇಶದಲ್ಲಿಯೂ ಡಿಸೆಂಬರ 31 ರ ರಾತ್ರಿ ಚಂದನ ರವಿದಾಸ ಹೆಸರಿನ ವ್ಯಕ್ತಿಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸಲಾಯಿತು. ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರು ದಾಖಲಿಸಿದ ಬಳಿಕ ಮಿಠುನ ಶೇಖ, ನಸೀಮ ಶೇಖ, ಫಿರೋಜ ಶೇಖ ಇವರೊಂದಿಗೆ ಮತ್ತೂ 5 ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಭಾಜಪ ಈ ಎರಡೂ ಪ್ರಕರಣದ ಕುರಿತು ಝಾರಖಂಡ ಸರಕಾರವನ್ನು ಟೀಕಿಸಿದೆ.
ಸಂಪಾದಕೀಯ ನಿಲುವುಶಸ್ತ್ರಗಳ ಭಯ ತೋರಿಸಿ ಹಿಂದೂಗಳನ್ನು ಬಲವಂತವಾಗಿ ಗೋಮಾಂಸವನ್ನು ತಿನ್ನಿಸುವ ಧೈರ್ಯವಾದರೂ ಹೇಗೆ ಬರುತ್ತದೆ ? ಇದನ್ನು ತಡೆಯಲು ಹಿಂದೂಗಳ ಪರಿಣಾಮಕಾರಿ ಸಂಘಟನೆಯ ಆವಶ್ಯಕತೆಯಿದೆ ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ