ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯ

ವಿಜಯಪುರ – ಅತ್ಯಂತ ಸರಳ ಜೀವನ, ಜ್ಞಾನಯೋಗಿ, ಭಕ್ತರ ಪಾಲಿಗೆ ನಡೆದಾಡುವ ದೇವರಾದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಗಲಿಕೆಯಿಂದ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. 2016 ರಲ್ಲಿ ವಿಜಯಪುರದ ಕಾರ್ಯಕ್ರಮವೊಂದರಲ್ಲಿ ಸನಾತನದ ಸಾಧಕರು ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಅವರ ದರ್ಶನ ಪಡೆದರು ಹಾಗೂ ಮಹಾಸ್ವಾಮಿಗಳ ಶುಭ ಹಸ್ತದಿಂದ ಸನಾತನ ಪಂಚಾಂಗ 2016 ರ ಉಧ್ಘಾಟನೆ ಮಾಡಲಾಯಿತು ಆ ಸಮಯದಲ್ಲಿ ಸನಾತನ 200 ಪಂಚಾಂಗ ವಿತರಣೆಗಾಗಿ ತರಲಾಗಿತ್ತು. ಮಹಾಸ್ವಾಮಿಗಳು ವೇದಿಕೆಯ ಮೇಲೆಯೇ ಸನಾತನ ಪಂಚಾಂಗವನ್ನು ಕೈಯಲ್ಲಿ ಹಿಡಿದು ‘ಸನತಾನ ಪಂಚಾಂಗವು ಪ್ರತಿಯೊಬ್ಬರ ಮನೆಯಲ್ಲಿ ಇರಬೇಕು’ ಎಂದು ಕರೆ ನೀಡಿದರು. ಇದರಿಂದ 200 ಪಂಚಾಂಗ 1 ಗಂಟೆಯಲ್ಲಿ ವಿತರಣೆ ಆಯಿತು ಹಾಗೂ ಪುನಃ 2000 ಪಂಚಾಂಗ ತರಬೇಕಾಯಿತು.

ಮಹಾಸ್ವಾಮಿಯವರಿಂದ ಸನಾತನ ಸಂಸ್ಥೆಯ ಸಂಸ್ಥಾಪಕ ಡಾ. ಆಠವಲೆ ಹಾಗೂ ಸನಾತನದ ಬಗ್ಗೆ ತೆಗೆದ ಗೌರವೋದ್ಗಾರ

ಸನಾತನವು ತುಂಬಾ ಒಳ್ಳೆ ಕಾರ್ಯ ಮಾಡುತ್ತಿದೆ, ಆಠವಲೆಯವರು(ಸಚ್ಚಿದಾನಂದ ಪರಭ್ರಹ್ಮ ಡಾ. ಜಯಂತ ಆಠವಲೆ) ತುಂಬಾ ಉತ್ತಮ ರೀತಿಯಲ್ಲಿ ಎಲ್ಲರನ್ನು ಒಗ್ಗೂಡಿಸುತ್ತಿದ್ದಾರೆ. ಸನಾತನವು ಉತ್ತಮ ಕಾರ್ಯ ಮಾಡುತ್ತಿದ್ದೆ ಎಂದು ಹೇಳಿದರು.