ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರರ ವ್ಯರ್ಥ ಆರೋಪ

ಪಾಟಲೀಪುತ್ರ(ಬಿಹಾರ)- ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯೋಗದಾನವೇನೂ ಇರಲಿಲ್ಲ. ಸಂಘಕ್ಕೆ ಸ್ವಾತಂತ್ರ್ಯ ಹೋರಾಟದೊಂದಿಗೆ ಯಾವುದೇ ಕೊಡು-ಕೊಳ್ಳುವಿಕೆಯಿರಲಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ಮತ್ತು ಸಂಯುಕ್ತ ಜನತಾ ದಳದ ನಾಯಕ ನಿತೀಶ ಕುಮಾರ ಇವರು ಆರೋಪಿಸಿದ್ದಾರೆ.
बिहार के मुख्यमंत्री नीतीश कुमार ने एक कार्यक्रम के दौरान राष्ट्रीय स्वयंसेवक संघ और पीएम मोदी पर जमकर निशाना साधा. https://t.co/ZIFPACmQQ5
— AajTak (@aajtak) January 1, 2023
ನಿತೀಶ ಕುಮಾರರು ತಮ್ಮ ಮಾತನ್ನು ಮುಂದುವರಿಸುತ್ತಾ, ನನ್ನ ತಂದೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ನನ್ನ ಜನನ ಸ್ವಾತಂತ್ರ್ಯದ ಬಳಿಕ ಆಯಿತು; ಅದರ ನಂತರ ನಾನು ಸ್ವಾತಂತ್ರ್ಯ ಹೋರಾಟದ ಪ್ರತಿಯೊಂದು ವಿಷಯಗಳನ್ನು ತಿಳಿದುಕೊಂಡೆನು. ಭಾರತದ ಸ್ವಾತಂತ್ರ್ಯದಲ್ಲಿ ಮಹಾತ್ಮಾ ಗಾಂಧಿಯವರ ಯೋಗದಾನವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ; ಆದರೆ ಈಗ ಕೆಲವು ಜನರು ರಾಷ್ಟ್ರಪಿತನ ವಿಷಯದಲ್ಲಿ ಏನು ಮಾತನಾಡುತ್ತಿದ್ದಾರೆ ಎನ್ನುವುದನ್ನು ಎಲ್ಲರೂ ನೋಡುತ್ತಿದ್ದಾರೆ. ಈಗ ಅವರು ‘ ಹಳೆಯ ರಾಷ್ಟ್ರಪಿತನನ್ನು ಮರೆಯಿರಿ, ಹೊಸ ರಾಷ್ಟ್ರಪಿತ ಬಂದಿದ್ದಾರೆ’ ಎಂದು ಹೇಳುತ್ತಿದ್ದಾರೆ. ಈ ಹೊಸ ರಾಷ್ಟ್ರಪಿತ ಭಾರತಕ್ಕೆ ಏನು ಮಾಡಿದ್ದಾರೆ? ಅವರು ಏನಾದರೂ ಕಾರ್ಯ ಮಾಡಿದ್ದಾರೆಯೇ? ಅವರ ಕಾಲದಲ್ಲಿ ಭಾರತ ಯಾವ ಕ್ಷೇತ್ರದಲ್ಲಿ ಮುಂದೆ ಬಂದಿದೆ? ಅವರು ಕೇವಲ ಹೊಸ ತಂತ್ರಜ್ಞಾನವನ್ನು ಬಲಪೂರ್ವಕವಾಗಿ ಉಪಯೋಗಿಸಿದ್ದಾರೆ. ಮೊದಲು ಮಾಧ್ಯಮಗಳು ಸರಕಾರವಿರಲಿ ಅಥವಾ ವಿರೋಧ ಪಕ್ಷ, ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಸ್ಪಷ್ಟವಾಗಿ ಮಂಡಿಸುತ್ತಿದ್ದವುರು; ಆದರೆ ಈಗ ಮಾಧ್ಯಮಗಳಿಗೆ ಏನು ಹೇಳಲಾಗುತ್ತದೆಯೋ ಅದನ್ನೇ ಬರೆಯಬೇಕಾಗುತ್ತಿದೆಯೆಂದು ಹೇಳಿದರು.
ಸಂಪಾದಕೀಯ ನಿಲುವು
|
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ