ಪೊಲೀಸ ಮಹಾಸಂಚಾಲಕರು ಪೊಲೀಸ ಠಾಣೆಗೆ ಹೋಗಿ ಮಾಡಿದ ನಿರೀಕ್ಷಣೆಯಲ್ಲಿ ಬಯಲು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಪೊಲೀಸ ಮಹಾಸಂಚಾಲಕರಾದ ಆರ್. ಕೆ. ಭಾರದ್ವಾಜರವರು ಪೊಲೀಸ ಠಾಣೆಗೆ ಹೋಗಿ ಪೊಲೀಸರಿಂದ ಶಸ್ತ್ರ ಚಲಾಯಿಸುವ ಪ್ರಾತ್ಯಕ್ಷಿಕೆ ಮಾಡಿಸಿಕೊಂಡರು. ಈ ಸಮಯದಲ್ಲಿ ಓರ್ವ ಪೊಲೀಸ ನಿರೀಕ್ಷಕನಿಗೆ ಬಂದೂಕಿನಲ್ಲಿ ಎಲ್ಲಿಂದ ಗುಂಡು ಹಾಕಬೇಕು, ಎಂಬುದೇ ತಿಳಿದಿಲ್ಲದಿರುವ ಹಾಗೂ ಅವನು ಬಂದೂಕಿನ ನಳಿಕೆಯಲ್ಲಿ ಗುಂಡನ್ನು ಹಾಕಿ ಗೊಲಿಬಾರ ಮಾಡಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಪೊಲೀಸ ಅಧಿಕಾರಿಗಳ ಈ ಸ್ಥಿತಿಯನ್ನು ನೋಡಿ ಪೊಲೀಸ ಮಹಾಸಂಚಾಲಕರಾದ ಭಾರದ್ವಾಜರವರು ಎಲ್ಲ ಅಧಿಕಾರಿಗಳಿಗೆ ಯೋಗ್ಯ ತರಬೇತಿಯನ್ನು ನೀಡುವ ಆದೇಶ ನೀಡಿದ್ದಾರೆ.
Media, AAP and others mock UP cop for ‘not knowing how to load a gun’, police clarify it was the correct procedure for the anti-riot riflehttps://t.co/9Yp1zRnZVG
— OpIndia.com (@OpIndia_com) December 28, 2022
| ಸಂಪಾದಕೀಯ ನಿಲುವು
ಪೊಲೀಸ ಇಲಾಖೆಯಲ್ಲಿ ಇಂತಹ ಅಧಿಕಾರಿ ಹೇಗೆ ಸೇರ್ಪಡೆಯಾದನು ? ‘ಇಂತಹವರಿಗೆ ತರಬೇತಿ ನೀಡುವಾಗ ಅವರು ಏನು ಮಾಡುತ್ತಿದ್ದರು ?’ ಎಂಬುದರ ತನಿಖೆ ನಡೆಯುವುದು ಆವಶ್ಯಕವಾಗಿದೆ ! ಇಂತಹ ಪೊಲೀಸರು ಎಂದಾದರೂ ಜನತೆಯ ರಕ್ಷಣೆ ಮಾಡಬಲ್ಲರೇ ? |
ಡೆಹ್ರಾಡೂನ್ (ಉತ್ತರಾಖಂಡ): ಮುಸ್ಲಿಮ್ ಗುಂಪಿನಿಂದ ಬಿಜೆಪಿ ನಾಯಕನ ಹತ್ಯೆ!
ಭಾರತೀಯ ನಾವಿಕರ ಸಾವು: ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ
ಪಿ.ಎಫ್.ಐ.ನ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ
ಹಿಂದೂಗಳ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಿ ನ್ಯಾಯ ಸಿಗುವಂತೆ ಪ್ರಯತ್ನಿಸುತ್ತೇನೆ! – ಡಾ. ಅನಿಲ್ ಬೋಂಡೆ, ಸಂಸದರು, ಬಿಜೆಪಿ
ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !
ಮದುವೆಯಾದ ಮೇಲೂ ಮುಸ್ಲಿಂ ಪ್ರಿಯಕರನ ಸಂಪರ್ಕದಲ್ಲಿದ್ದ ಹಿಂದು ಯುವತಿಯನ್ನು ಆಕೆಯ ಸಹೋದರನೇ ಕೊಲೆ ಮಾಡಿದ !