ಮಂಗಳೂರಿನಲ್ಲಿನ ಘಟನೆ

ಮಂಗಳೂರು – ಹಿಂದೂ ಯುವತಿಯೊಬ್ಬಳನ್ನು ಬಲವಂತವಾಗಿ ಮತಾಂತರಗೊಳಿಸಲು ಯತ್ನಿಸಿದ ಪ್ರಕರಣದಲ್ಲಿ ಮತಾಂಧ ಮಹಿಳಾ ವೈದ್ಯೆ ಸೇರಿದಂತೆ ಮೂವರು ಮತಾಂಧರ ವಿರುದ್ಧ ದೂರು ದಾಖಲಾಗಿದೆ.
೧. ಮಾಧ್ಯಮದ ವರದಿ ಪ್ರಕಾರ, ಸಂತ್ರಸ್ತೆ ತನ್ನ ಸಂಚಾರವಾಣಿಗೆ ರೀಚಾರ್ಜ್ ಮಾಡಲು ಖಲೀಲ ಎಂಬ ಮತಾಂಧನ ಅಂಗಡಿಗೆ ಹೋಗುತ್ತಿದ್ದಳು. ಖಲೀಲ ಅವಳೊಂದಿಗೆ ಸ್ನೇಹ ಬೆಳೆಸಿದನು ಮತ್ತು ಅವಳಿಗೆ ಉತ್ತಮ ಸಂಬಳದ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದನು.
೨. ಖಲೀಲ ಅವಳ ಹೆಸರನ್ನು ಆಯಿಷಾ ಎಂದು ಬದಲಾಯಿಸಿದನು. ಅವಳಿಗೆ ಬಲವಂತವಾಗಿ ನಮಾಜ್ ಮತ್ತು ಕುರಾನ ಅನ್ನು ಓದಲು ಅನಿವಾರ್ಯಗೊಳಿಸಿದ. ಖಲೀಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನು.
೩. ಖಲೀಲ ಕೆಲಸದ ನೆಪ ಹೇಳಿ ಸಂತ್ರಸ್ತ ಯುವತಿಯನ್ನು ಡಾ. ಜಮೀಲಾ ಅವರ ಮನೆಗೆ ಕರೆದುಕೊಂಡು ಹೋದನು. ಅಲ್ಲಿ ಅವಳಿಗೆ ಬುರ್ಖಾ ಧರಿಸುವಂತೆ ಬಲವಂತ ಮಾಡಲಾಯಿತು. ಅಲ್ಲಿ, ಆಯಮನ ಎಂಬ ಮತಾಂಧನು ಅವಳನ್ನು ಇಂಸ್ಟಾಗ್ರಾಮನಲ್ಲಿ ಸಂಪರ್ಕಿಸಿದನು ಮತ್ತು ಅವಳೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸಿದನು.

೪. ಸಂತ್ರಸ್ತ ಯುವತಿಯ ತಾಯಿಯು, ಖಲೀಲ, ಡಾ. ಜಮೀಲಾ ಮತ್ತು ಆಯಮನ ವಿರುದ್ಧ ಪೊಲೀಸ ದೂರು ದಾಖಲಿಸಿದರು. ’ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !