ವೈಶಾಲಿ (ಬಿಹಾರ) ಇಲ್ಲಿ ಟ್ರಕ್‌ನ ಅಡಿಯಲ್ಲಿ ಸಿಲುಕಿ ೮ ಜನರು ಸಾವು, ಅನೇಕ ಜನರಿಗೆ ಗಾಯ !

ಅರಳಿ ಮರದ ಕೆಳಗೆ ಪೂಜೆ ಮಾಡುವಾಗ ಸಂಭವಿಸಿದ ಘಟನೆ !

ವೈಶಾಲಿ (ಬಿಹಾರ) – ಇಲ್ಲಿಯ ಸುಲ್ತಾನಪುರ ಪ್ರದೇಶದಲ್ಲಿ ಗಂಟೆಗೆ ೧೨೦ ಕಿಲೋಮೀಟರ್ ವೇಗದಲ್ಲಿ ಬಂದ ಟ್ರಕ್ ಕೆಳಗೆ ಸಿಲುಕಿ ೮ ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ ಇತರ ಕೆಲವು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ೬ ಮಕ್ಕಳ ಸಮಾವೇಶ ಇದೆ. ಇವರೆಲ್ಲರೂ ಇಲ್ಲಿಯ ಅರಳಿ ಮರದ ಕೆಳಗಡೆ ನಿಂತು ಪೂಜೆ ಮಾಡುವಾಗ ಈ ಘಟನೆ ನಡೆದಿದೆ. ಟ್ರಕ್‌ನ ಚಾಲಕ ಸಾರಾಯಿ ಕುಡಿದು ಓಡಿಸುತ್ತಿದ್ದನು, ಎಂದು ತಿಳಿದು ಬಂದಿದೆ. ವಿಶೇಷ ಎಂದರೆ ಬಿಹಾರದಲ್ಲಿ ಸಾರಾಯಿ ನಿಷೇಧ ಇದೆ. (ಸಾರಾಯಿ ನಿಷೇಧ ಇರುವಾಗ ಈ ರೀತಿಯ ಘಟನೆ ನಡೆಯುತ್ತಿದೆ, ಇದು ಸರಕಾರಕ್ಕೆ ಲಚ್ಚಾಸ್ಪದವಾಗಿದೆ ! ಈ ಅಪಘಾತಕ್ಕೆ ಸರಕಾರಕವೆ ಹೋಣೆಹೊತ್ತಬೇಕು ! – ಸಂಪಾದಕರು)

ಪ್ರಧಾನಿ ನರೇಂದ್ರ ಮೋದಿಯವರು ಘಟನೆಯ ಬಗ್ಗೆ ಸಂತಾಪ ಸೂಚಿಸುತ್ತಾ, ಮೃತರ ಸಂಬಂಧಿಕರಿಗೆ ೨ ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಹಾಗೂ ಗಾಯಗೊಂಡಿರುವವರಿಗೆ ೫೦ ಸಾವಿರ ರೂಪಾಯಿ ನೀಡಲಾಗುವುದೆಂದು ಹೇಳಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮೂ ಇವರು ಕೂಡ ಸಂತಾಪ ಸೂಚಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ನಿತೀಶ ಕುಮಾರ ಇವರು ಮೃತರ ಸಂಬಂಧಕರಿಗೆ ಪ್ರತ್ಯೇಕವಾಗಿ ೫ ಲಕ್ಷ ರೂಪಾಯ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.