ಮಧ್ಯಪ್ರದೇಶದ ಇಂದೂರಿನ ಮಿಠಾಯಿಯ ಅಂಗಡಿಯಲ್ಲಿ ಬೆದರಿಕೆಯ ಪತ್ರ ಪತ್ತೆ

ಇಂದೂರ (ಮಧ್ಯಪ್ರದೇಶ) – ಸಧ್ಯ ‘ಭಾರತ ಜೋಡೊ’ ಯಾತ್ರೆಯಲ್ಲಿ ಭಾಗವಹಿಸಿರುವ ಕಾಂಗ್ರೆಸ ಮುಖಂಡ ರಾಹುಲ ಗಾಂಧಿಯವರು ಮಧ್ಯಪ್ರದೇಶದ ಇಂದೂರನ್ನು ತಲುಪುತ್ತಲೇ ಅವನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಒಂದು ಪತ್ರದ ಮೂಲಕ ಬೆದರಿಕೆಯನ್ನು ಹಾಕಿದ್ದಾರೆ. ಈ ಪತ್ರ ಇಂದೂರಿನಲ್ಲಿರುವ ಒಂದು ಮಿಠಾಯಿಯ ಅಂಗಡಿಯಲ್ಲಿ ಕಂಡು ಬಂದಿದೆ. ಪೊಲೀಸರು ಈ ಪತ್ರವನ್ನು ಜಪ್ತಿ ಮಾಡಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಪೊಲೀಸರು ಸಂಬಂಧಿಸಿದ ಅಂಗಡಿಯಲ್ಲಿ ಜೋಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ಚಿತ್ರೀಕರಣವನ್ನು ಪರಿಶೀಲಿಸುತ್ತಿದೆ.
#इंदौर -राहुल गांधी की #भारतजोडोयात्रा से पहले लेटर बम,एक मिठाई दुकान पर पहुंचे पत्र से मिली धमकी,शहर में जगह जगह जगह बम विस्फोट करने की धमकी,राहुल गांधी और पूर्व मुख्यमंत्री कमलनाथ को जान से मारने की धमकी,1984 में हुए दंगो का किया जिक्र,पुलिस और इंटेलीजेंस की टीम जांच में जुटी pic.twitter.com/wCN0Ukd4xt
— Vikas Singh Chauhan (@vikassingh218) November 18, 2022
ಪೊಲೀಸರ ಅಭಿಪ್ರಾಯದಂತೆ, ಬೆದರಿಕೆ ಪತ್ರವನ್ನು ಅಪರಿಚಿತ ವ್ಯಕ್ತಿಯು ಅಂಗಡಿಯಲ್ಲಿ ಇಟ್ಟಿದ್ದಾರೆ. ತದನಂತರ ಅಂಗಡಿಕಾರನು ಅದನ್ನು ಪೊಲೀಸರಿಗೆ ಒಪ್ಪಿಸಿದನು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿಯನುಸಾರ, ‘ರಾಹುಲ ಗಾಂಧಿಯವರು ಇಂದೂರಿನಲ್ಲಿ ಖಾಲಸಾ ವಿಶ್ವವಿದ್ಯಾಲಯದಲ್ಲಿ ವಾಸ್ತವ್ಯವಿರಲಿದ್ದಾರೆ. ಆಗ ಅವರನ್ನು ಬಾಂಬ್ ನಿಂದ ಸ್ಪೋಟಿಸಲಾಗುವುದು’, ಎಂದು ಪತ್ರದಲ್ಲಿ ಉಲ್ಲೇಖವಿದೆ. ಪತ್ರ ಬರೆಯುವ ವ್ಯಕ್ತಿಯು ತಾನು ಸಿಖ್ ಸಮುದಾಯದವನೆಂದು ತಿಳಿಸಿದ್ದಾನೆ. ಈ ಪತ್ರದಲ್ಲಿ ಅವನು ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ಭುಗಿಲೆದ್ದ ಸಿಖ್ ವಿರೋಧಿ ಗಲಭೆಯನ್ನು ಉಲ್ಲೇಖಿಸಿದ್ದಾನೆ. ಪತ್ರದ ಕೊನೆಯಲ್ಲಿ ಒಂದು ಸಂಚಾರವಾಣಿ ಸಂಖ್ಯೆಯನ್ನು ನೀಡಲಾಗಿದೆ. ‘ಆ ದಿನ ಸಂಪೂರ್ಣ ಇಂದೂರ ನಗರ ಸ್ಫೋಟದಿಂದ ಹೆದರುವುದು’, ಎಂದು ಎಚ್ಚರಿಕೆಯನ್ನು ಈ ಪತ್ರದಲ್ಲಿ ತಿಳಿಸಿದ್ದಾನೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!