|

ಉತ್ತರ ೨೪ ಪರಗನಾ (ಬಂಗಾಲ) – ಇಲ್ಲಿಯ ಚಪಾಲಿ ಗ್ರಾಮದಲ್ಲಿ ತೃಣ ಮೂಲ ಕಾಂಗ್ರೆಸ್ಸಿನ ನಾಯಕ ಅಬೂಲ ಹುಸೈನ್ ಗಾಯೆನ ಇವನ ಮನೆಯಲ್ಲಿ ಚೆಂಡು ಎಂದು ತಿಳಿದು ಬಾಂಬ್ ಜೊತೆ ಆಟ ಆಡುತ್ತಿದ್ದ ಒಬ್ಬ ಚಿಕ್ಕ ಬಾಲಕಿ ಈ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದ್ದಾಳೆ. ಹಾಗೂ ಈ ಅಪಘಾತದಲ್ಲಿ ಕೆಲವು ಮಕ್ಕಳು ಗಾಯಗೊಂಡಿದ್ದಾರೆ. ಪೊಲೀಸರು ಅಬುಲ್ ಹುಸೈನ್ ನನ್ನು ಬಂಧಿಸಿದ್ದಾರೆ. ಈ ಘಟನೆ ಚಪಾಲಿ ಗ್ರಾಮದಲ್ಲಿ ನಡೆದಿದೆ. ಗಾಯೆನ ಇವನು ಪಂಚಾಯತ ಚುನಾವಣೆಯಲ್ಲಿ ಅವನ ವರ್ಚಸ್ಸು ಹೆಚ್ಚಿಸಲು ಮನೆಯಲ್ಲಿ ಬಾಂಬ್ ಸಂಗ್ರಹಿಸಿದ್ದನು, ಎಂಬ ಮಾಹಿತಿಯನ್ನು ಪೊಲೀಸ ಅಧಿಕಾರಿ ನೀಡಿದರು. ಗ್ರಾಮದಲ್ಲಿನ ಬಿಗುವಿನ ವಾತಾವರಣ ನೋಡುತ್ತ ಹೆಚ್ಚುವರಿ ಪೊಲೀಸ ಬಂದೋಬಸ್ತ್ ಮಾಡಲಾಗಿದೆ.
ಅಬೂಲ್ ಹುಸೈನ್ ಗಾಯೆನ ಇವನ ಮನೆಯಲ್ಲಿ ಕೆಲವು ಸಂಬಂಧಿಕರು ಬಂದಿದ್ದರು. ಇದರಲ್ಲಿ ಅವರ ೮ ವರ್ಷದ ಝುಮ ಖಾತೂನ್ ಈ ಸೋದರಸೊಸೆಯು ಇದ್ದಳು. ಈ ಹುಡುಗಿ ಗಾಯೆನ ಇವನ ಸಾಕು ಕತ್ತೆಯ ತಲೆಯ ಹತ್ತಿರ ಕಟ್ಟಿರುವ ಬಾಂಬ್ ಜೊತೆ ಚಂಡು ಎಂದು ತಿಳಿದು ಆಟವಾಡುತ್ತಿದ್ದಳು. ಅದೇ ಸಮಯದಲ್ಲಿ ಬಾಂಬ್ ಸ್ಪೋಟವಾಗಿದೆ ಮತ್ತು ಝುಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ, ಎಂದು ಪೊಲೀಸರು ಹೇಳಿದರು.
ಈ ಮೊದಲು ಕೂಡ ತೃಣಮೂಲ ಕಾಂಗ್ರೆಸ್ಸಿನ ನಾಯಕರ ಮನೆಯಲ್ಲಿ ಬಾಂಬ್ ಸ್ಪೋಟ ನಡೆದಿತ್ತು !
ನವಂಬರ್ ೬ ರಂದು ಬಂಗಾಲದಲ್ಲಿನ ಡಂಗಂಗಾದಲ್ಲಿ ತೃಣಮೂಲ ಕಾಂಗ್ರೆಸ್ಸಿನ ನಾಯಕನ ಮನೆಯಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಪೊಲೀಸರು ಈ ಘಟನೆಗೆ ಸಂಬಂಧಿತ ಮಾಹಿತಿ ನೀಡುವಾಗ ಕೆಲವು ಕಾರ್ಮಿಕರು ತೃಣಮೂಲ ಕಾಂಗ್ರೆಸ್ಸಿನ ಸ್ಥಳೀಯ ನಾಯಕರ ಸ್ವಾಮ್ಯತ್ವದ ಕಾಮಗಾರಿ ನಡೆಯುವ ಕಟ್ಟಡಗಳಲ್ಲಿ ಕೆಲಸ ಮಾಡುವಾಗ ಈ ಸ್ಫೋಟ ನಡೆದಿರುವ ಬಗ್ಗೆ ಹೇಳಿದರು. ಇದರ ನಂತರ ಪೊಲೀಸರು ೩ ಜೀವಂತ ಬಾಂಬ್ ಘಟನಾ ಸ್ಥಳದಿಂದ ವಶಪಡಿಸಿಕೊಂಡಿದ್ದರು.
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !