|

ವಾರಾಣಸಿ (ಉತ್ತರಪ್ರದೇಶ): ವಾರಾಣಸಿಯ ತ್ವರಿತ ದಿವಾಣಿ ನ್ಯಾಯಾಲಯವು ಜ್ಞಾನವಾಪಿಯ ಪ್ರಕರಣದಲ್ಲಿ ಹಿಂದೂ ಪಕ್ಷದಿಂದ ದಾಖಲಿಸಲಾಗಿರುವ ಮನವಿಯ ವಿಚಾರಣೆಗೆ ಯೋಗ್ಯವಾಗಿದೆ ಎಂದು ಹೇಳಿ ಅದನ್ನು ದಾಖಲಿಸಿಕೊಂಡಿದೆ. ಈ ಮನವಿಗೆ ಮುಸಲ್ಮಾನರಿಂದ ವಿರೋಧ ವ್ಯಕ್ತವಾಗಿತ್ತು. ಈ ಮನವಿಯಲ್ಲಿ ಮನವಿಕರ್ತರಾದ ಕಿರಣ ಸಿಂಹ ಇವರು ಜ್ಞಾನವಾಪಿಯ ಪರಿಸರದಲ್ಲಿ ಮುಸಲ್ಮಾನರ ಪ್ರವೇಶ ನಿಷೇಧಿಸಬೇಕು. ಈ ಸಂಪೂರ್ಣ ಪರಿಸರವನ್ನು ಹಿಂದೂಗಳಿಗೆ ಒಪ್ಪಿಸಿ ಮತ್ತು ಅಲ್ಲಿ ಸಿಕ್ಕಿರುವ ಶಿವಲಿಂಗಕ್ಕೆ ಪೂಜೆ ಮಾಡುವ ಅನುಮತಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಇದರ ಬಗ್ಗೆ ಈಗ ಡಿಸೆಂಬರ್ ೨ ರಂದು ವಿಚಾರಣೆ ನಡೆಯಲಿದೆ. ಇದು ತ್ವರಿತ ನ್ಯಾಯಾಲಯ ಇರುವುದರಿಂದ ಈ ಪ್ರಕರಣದ ಬಗ್ಗೆ ವಿಚಾರಣೆ ಬೇಗ ನಡೆದು ತೀರ್ಪು ಬೇಗನೆ ಬರುವ ಸಾಧ್ಯತೆ ಇದೆ. ಈ ವಿಷಯದ ಬಗ್ಗೆ ವಿಶ್ವ ವೈದಿಕ ಸನಾತನ ಸಂಘದ ಕಾರ್ಯಕಾರಿ ಅಧ್ಯಕ್ಷ ಸಂತೋಷ ಸಿಂಹ ಇವರು, ಇದು ನಮ್ಮ ದೊಡ್ಡ ಗೆಲುವು ಆಗಿರುವುದು. ಈಗ ವಿಚಾರಣೆಯಲ್ಲಿ ನಮ್ಮ ಬೇಡಿಕೆ ಒಪ್ಪಲಾಗುವುದು ಎಂದು ನಮಗೆ ಅಪೇಕ್ಷೆ ಇದೆ ಎಂದು ಹೇಳಿದರು.
Gyanvapi Case: Varanasi Court To Hear Plea Seeking Worship Of ‘Shivling’ Found In Mosque Complex#GyanvapiCasehttps://t.co/PenMheqyjZ
— ABP LIVE (@abplive) November 17, 2022
ಮುಂದಿನ ವರ್ಷ ಸರ್ವೋಚ್ಚ ನ್ಯಾಯಾಲಯವು ಪೂಜಾಸ್ಥಳ ಕಾನೂನಿನ ಸಂದರ್ಭದಲ್ಲಿ ಕೂಡ ವಿಚಾರಣೆ ನಡೆಸಲಿದೆ ಈ ಮನವಿ ಜ್ಞಾನವಾಪಿಗೆ ಸಂಬಂಧಪಟ್ಟದ್ದಾಗಿದೆ. ಇದರಲ್ಲಿ ಡಿಸೆಂಬರ್ ೧೨ ವರೆಗೆ ಕೇಂದ್ರ ಸರಕಾರಕ್ಕೆ ಈ ವಿಷಯದ ಬಗ್ಗೆ ಪ್ರತಿಜ್ಞಾ ಪತ್ರ ಪ್ರಸ್ತುತಪಡಿಸಬೇಕಿದೆ. ಅದರ ನಂತರ ಜನವರಿಯಲ್ಲಿ ಇದರ ಬಗ್ಗೆ ವಿಚಾರಣೆ ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!