
ಝಾರಖಂಡನಲ್ಲಿ ‘ಲವ್ ಜಿಹಾದ’ ಹೊಸ ಪ್ರಕರಣ ಬಹಿರಂಗ
ಹಜಾರಿಬಾಗ(ಝಾರಖಂಡ)– ಇಲ್ಲಿಂದ ಮತಾಂಧರು ಒಬ್ಬ ಹದಿಹರೆಯದ ಹಿಂದೂ ಬಾಲಕಿಯನ್ನು ಅಪಹರಿಸಿದ ಪ್ರಕರಣ ಬಹಿರಂಗವಾಗಿದೆ. ಸಂತ್ರಸ್ತ ಬಾಲಕಿ ಬೆಂಗಳೂರಿನಲ್ಲಿ ಕಂಡು ಬಂದಿದ್ದಾಳೆಂದು ಪೊಲೀಸರು ಹೇಳಿದ್ದಾರೆ. ‘ಬಲವಂತದಿಂದ ಮತಾಂತರಗೊಳಿಸಿ ವಿವಾಹ ಮಾಡುವ ಉದ್ದೇಶದಿಂದ ನನ್ನ ಮಗಳನ್ನು ಅಪಹರಿಸಿದ್ದಾರೆ’, ಎಂದು ಬಾಲಕಿಯ ತಾಯಿ ಆರೋಪಿಸಿದ್ದಾಳೆ.
ಪೀಡಿತ ಬಾಲಕಿಯ ತಾಯಿಯು, ‘ನವೆಂಬರ ೪ ರಂದು ಶಾಹಿದ ಅನ್ಸಾರಿ ಮತ್ತು ಅರ್ಬಾಜ ಅನ್ಸಾರಿ ನಮ್ಮ ಮನೆಯಲ್ಲಿ ನುಗ್ಗಿ, ನನ್ನ ಮಗಳನ್ನು ದ್ವಿಚಕ್ರ ವಾಹನದ ಮೇಲೆ ಓಡಿಸಿಕೊಂಡು ಹೋಗಿದ್ದಾರೆ. ಆರೋಪಿ ೬ ತಿಂಗಳುಗಳಿಂದ ನನ್ನ ಮಗಳನ್ನು ಓಡಿಸಿಕೊಂಡು ಹೋಗುವ ಬೆದರಿಕೆಯನ್ನು ಹಾಕುತ್ತಿದ್ದನು’, ಎಂದು ದೂರು ನೀಡಿದ್ದಾರೆ. ಪೊಲೀಸರು ಬಾಲಕಿಯನ್ನು ಬೆಂಗಳೂರಿನಿಂದ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಹಜಾರಿಬಾಗ ಪೊಲೀಸ ಅಧೀಕ್ಷಕ ಮನೋಜ ರತನ ಚೌಥೆ ನೀಡಿದ್ದಾರೆ. ಮತ್ತು ಈ ಪ್ರಕರಣದಲ್ಲಿ ತನಿಖೆ ಮುಂದುವರಿದಿದೆಯೆಂದು ಅವರು ಹೇಳಿದ್ದಾರೆ. ಹಜಾರಿಬಾಗ ಭಾಜಪ ಶಾಸಕ ಮನೀಷ ಜೈಸ್ವಾಲ ಇವರು ರಾಜ್ಯ ಸರಕಾರದ ಮೇಲೆ ಒಲೈಕೆಯ ಆರೋಪವನ್ನು ಹೊರಿಸಿದ್ದಾರೆ.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ