
ಮೈಸೂರು – ಭಾರತೀಯ ಜನತಾ ಯುವ ಮೋರ್ಚಾದ ನಾಯಕ ಪ್ರವೀಣ ನೆಟ್ಟಾರು ಇವರ ಹತ್ಯೆಯ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ(ಪಿ.ಎಫ್.ಐ.)ನ ೩ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸುಳ್ಯದ ಶಫೀ ಬೆಳ್ಳಾರೆ, ಇಕಬಾಲ ಬೆಳ್ಳಾರೆ ಮತ್ತು ಇಬ್ರಾಹಿಂ ಶಾಹ ಇವರನ್ನು ಬಂಧಿಸಲಾಗಿದೆ. ಇಕಬಾಲ ಬೆಳ್ಳಾರೆ ಇವನು ಇಲ್ಲಿಯ ಬೆಳ್ಳಾರೆ ಗ್ರಾಮ ಪಂಚಾಯತಿ ಸದಸ್ಯನಾಗಿದ್ದಾನೆ ಹಾಗೂ ಶಫಿ ಬೆಳ್ಳಾರೆ ಪಿ.ಎಫ್.ಐ. ನ ರಾಜಕೀಯ ಶಾಖೆ ‘ಸೊಶಾಲಿಸ್ಟ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ ರಾಜ್ಯ ಸಚಿವನಾಗಿದ್ದಾನೆ.
ಪ್ರವೀಣ್ ನೆಟ್ಟಾರು ಹತ್ಯೆ: SDPI, PFIಗೆ ಸೇರಿದ ಮೂವರ ಬಂಧನ#Karnataka #PraveenNettaru #MurderCase #NIA https://t.co/IKlGD4EhVp
— oneindiakannada (@OneindiaKannada) November 6, 2022
ನೆಟ್ಟಾರು ಇವರ ಹತ್ಯೆಯ ಪ್ರಕರಣದಲ್ಲಿ ಪಿ.ಎಫ್.ಐ. ನ ಮಹಮ್ಮದ್ ಮುಸ್ತಫ, ತುಫೈಲ್, ಉಮರ್ ಫಾರೂಖ ಮತ್ತು ಅಬೂ ಬಕರ್ ಸಿದ್ದಿಕೀ ಇವರನ್ನು ಹುಡುಕಲಾಗಿತ್ತಿದೆ. ಇದರಲ್ಲಿ ಮಹಮ್ಮದ್ ಮುಸ್ತಫ ಮತ್ತು ತುಫೈಲ್ ಇವರ ಮಾಹಿತಿ ನೀಡುವವರಿಗೆ ೫ ಲಕ್ಷ ಹಾಗೂ ಉಮರ್ ಫಾರೂಕ್ ಇವನ ಮಾಹಿತಿ ನೀಡುವವರಿಗೆ ೨ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದೆಂದು, ಎನ್.ಐ.ಎ. ಘೋಷಿಸಿದೆ.
ಜುಲೈ ೨೬, ೨೦೨೨ ರಂದು ಪ್ರವೀಣ ನೆಟ್ಟಾರು ಇವರನ್ನು ಬೆಳ್ಳಾರೆಯಲ್ಲಿನ ಅವರ ಅಂಗಡಿಯ ಹೊರಗೆ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಝಾಕಿರ್ ಮತ್ತು ಶಫೀಕ್ ಇವರನ್ನು ಈಗಾಗಲೇ ಬಂಧಿಸಲಾಗಿದೆ.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ