ವಾಹನಗಳನ್ನು ಧ್ವಂಸಗೊಳಿಸಿ ಮನೆಯೊಳಗೆ ನುಗ್ಗಲು ಪ್ರಯತ್ನ

ನವದೆಹಲಿ – ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ ಅವರ ಮನೆಯ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿ ಅವರ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಇದರಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಈ ಮಾಹಿತಿಯನ್ನು ಸ್ವತಃ ಸ್ವಾತಿ ಮಾಲಿವಾಲ ಇವರು ಟ್ವೀಟ್ ಮಾಡಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರಿಗೆ ದೂರು ನೀಡುತ್ತಿದ್ದೇನೆ ಎಂದು ಸ್ವಾತಿ ಮಾಲಿವಾಲ ಹೇಳಿದ್ದಾರೆ.
ಸ್ವಾತಿ ಮಾಲಿವಾಲ ಅವರು ಅಕ್ಟೋಬರ್ ೧೭ ರ ಬೆಳಗ್ಗೆ ಟ್ವೀಟ್ ಮಾಡಿ, ‘ಕೆಲ ಸಮಯದ ಹಿಂದೆ ಕೆಲವರು ನನ್ನ ಮನೆಗೆ ನುಗ್ಗಿ ದಾಳಿ ನಡೆಸಿದರು. ಅವರು ನನ್ನ ಮತ್ತು ನನ್ನ ತಾಯಿಯ ವಾಹನವನ್ನು ಧ್ವಂಸಗೊಳಿಸಿದರು. ಅದೃಷ್ಟವಶಾತ್ ನಾನು ಮತ್ತು ಅಮ್ಮ ಇಬ್ಬರೂ ಮನೆಯಲ್ಲಿರಲಿಲ್ಲ, ಇಲ್ಲದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ! ನೀವು ಏನು ಬೇಕಾದರೂ ಮಾಡಿ, ನಾನು ಹೆದರುವುದಿಲ್ಲ’ ಎಂದು ಮಾಹಿತಿ ನೀಡಿದರು
An intruder broke into the house of #DCW Chairperson #SwatiMaliwal on 17 Oct, and smashed the windshields of two cars parked at the residence.https://t.co/SoWmmyuVfO
— The Quint (@TheQuint) October 17, 2022
ಸಾಜಿದ ಖಾನ ವಿರುದ್ಧ ಧ್ವನಿ ಎತ್ತಿದಾಗಿನಿಂದ ಬೆದರಿಕೆಗಳು
ಸ್ವಾತಿ ಮಾಲಿವಾಲ ಇವರು, ‘ಚಿತ್ರ ನಿರ್ಮಾಪಕ ಮತ್ತು ಬಿಗ್ ಬಾಸ್ ಸ್ಪರ್ಧಿ ಸಾಜಿದ ಖಾನ ವಿರುದ್ಧ ನಾನು ಧ್ವನಿ ಎತ್ತಿದಾಗಿನಿಂದ ನನಗೆ ವಿವಿಧ ಬೆದರಿಕೆಗಳು ಬರುತ್ತಿವೆ.’ ಎಂದು ಆರೋಪಿಸಿದ್ದಾರೆ.
ದೆಹಲಿ ಮಹಿಳಾ ಆಯೋಗವು ಸಾಜಿದ ಖಾನ ಅವರನ್ನು ಬಿಗ್ ಬಾಸ್ ಶೋನಿಂದ ತೆಗೆದುಹಾಕುವಂತೆ ಒತ್ತಾಯಿಸಿತ್ತು. ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ ಮಾತನಾಡಿ, ಸಾಜಿದ ಖಾನ ವಿರುದ್ಧ ೧೦ ಕ್ಕೂ ಹೆಚ್ಚು ಮಹಿಳೆಯರ ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆಯ ಆರೋಪವಿದೆ ಎಂದು ಹೇಳಿದರು. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಈ ಘಟನೆಯು, ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯ ದುಸ್ಥಿತಿಯ ನಿದರ್ಶನವಾಗಿದೆ ! ಕೇಂದ್ರ ಸರಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ! |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ