ರಾಷ್ಟ್ರೀಯ ತನಿಖಾ ದಳದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ

ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮಾಡಿದ ಪ್ರಕರಣ

ಶ್ರೀನಗರ : ಭಯೋತ್ಪಾದನೆಗೆ ಹಣಕಾಸು ಪೂರೈಕೆ ನೀಡುವ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’ಯು) ಕಾಶ್ಮೀರದಲ್ಲಿ ದಾಳಿ ನಡೆಸಿದೆ. ಪೂಂಚ್, ಜಮ್ಮು, ರಾಜೌರಿ, ಪುಲ್ವಾಮಾ, ಶ್ರೀನಗರ, ಬುಡಗಾಮ, ಬಾಂಡಿಪೋರಾ, ಶೋಪಿಯಾಂ ಮುಂತಾದ ನಗರಗಳಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದ ‘ಅಲ್-ಹುದಾ ಎಜುಕೇಷನಲ್ ಟ್ರಸ್ಟ್’ ಅನಧಿಕೃತ ಸಂಘಟನೆ ಎಂದು ಸರಕಾರ ಘೋಷಿಸಿರುವ ‘ಜಮಾತ್-ಎ-ಇಸ್ಲಾಮಿ’ ಸಂಘಟನೆಗೆ ಹಣಕಾಸು ಪೂರೈಕೆ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಎನ್.ಐ.ಎ.’ಯು ಪ್ರಕರಣ ದಾಖಲಿಸಿದೆ.

ಸಂಪಾದಕೀಯ ನಿಲುವು

ಭಯೋತ್ಪಾದಕರಿಗೆ ಬೆಂಬಲಿಸುವವರನ್ನು ದೇಶವಿರೋಧಿ ಎಂದು ನಿರ್ಧರಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳದ್ದರಿಂದ ಕಾಶ್ಮೀರದಂತಹ ಸ್ಥಳಗಳಲ್ಲಿ ಮತಾಂಧರು ಭಯೋತ್ಪಾದಕರಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಾರೆ ! ಅವರು ಇಂತಹ ಕೃತ್ಯಗಳನ್ನು ಮಾಡಲು ಧೈರ್ಯ ತೋರಿಸಬಾರದು ಅಂತಹ ಕಠಿಣ ಶಿಕ್ಷೆಯನ್ನು ಸರಕಾರ ಇಂತಹ ರಾಷ್ಟ್ರದ್ರೋಹಿಗಳಿಗೆ ಎಂದು ನೀಡುವರು ?