|

ಬೀದರ್ – ೫೬೨ ವರ್ಷಗಳಷ್ಟು ಪ್ರಾಚೀನ ಮಹಮೂದ್ ಗವಾನ್ ಮದರಸಾದಲ್ಲಿ ಒಂದು ಗುಂಪು ಪೂಜೆಯನ್ನು ಮಾಡಿದ ಘಟನೆಯು ಅಕ್ಟೋಬರ್ ೬ ರ ರಾತ್ರಿ ನಡೆಯಿತು. ಈ ಘಟನೆಯ ನಂತರ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಸಲ್ಮಾನ ಸಂಘಟನೆಗಳು ಈ ಘಟನೆಯನ್ನು ಖಂಡಿಸಿವೆ. ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುತ್ತಿದೆ. ಈ ಮದರಸಾವನ್ನು ೧೪೬೦ ರಲ್ಲಿ ನಿರ್ಮಿಸಲಾಗಿತ್ತು. ಪ್ರಸ್ತುತ ಇದು ಭಾರತೀಯ ಪುರಾತತ್ವ ಇಲಾಖೆಯ ನಿಯಂತ್ರಣದಲ್ಲಿದೆ. ಇಲ್ಲಿ ವರ್ಷಕ್ಕೆ ಎರಡು ಬಾರಿ ಪೂಜೆ ಸಲ್ಲಿಸಲು ಅನುಮತಿಯಿರುವಾಗ ಆ ಸ್ಥಳದ ಬದಲಾಗಿ ಮದರಸಾದಲ್ಲಿ ಪೂಜೆ ಸಲ್ಲಿಸಲಾಗಿರುವ ಕಾರಣಕ್ಕೆ ಅದನ್ನು ವಿರೋಧಿಸಲಾಗುತ್ತಿದೆ. ಪೂಜೆಯ ಘಟನೆಯ ನಂತರ ಪೊಲೀಸರು ೯ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇದುವರೆಗೆ ೪ ಜನರನ್ನು ಬಂಧಿಸಿದ್ದಾರೆ. ಅಲ್ಲದೆ, ೫ ಜನರಿಗಾಗಿ ಶೋಧ ನಡೆಯುತ್ತಿದೆ.
भीड़ ने 562 साल पुराने मदरसे में जबरन घुसकर की पूजा, बीदर के ऐतिहासिक मदरसे में पूजा पर बवाल…ओवैसी ने बीजेपी पर बोला हमला #Karnataka #Madrasa @Payodhi_Shashi pic.twitter.com/Ru9MRrrXan
— Zee News (@ZeeNews) October 7, 2022
೧. ಪೊಲೀಸ್ ಅಧೀಕ್ಷಕ ನೀಡಿರುವ ಮಾಹಿತಿ ಪ್ರಕಾರ ನಿಜಾಮರ ಕಾಲದಿಂದಲೂ ದಸರಾ ಪೂಜೆ ಮಾಡುವ ಸಂಪ್ರದಾಯವಿದೆ. ಮದರಸಾ ಪರಿಸರದಲ್ಲಿ ಒಂದು ಮಿನಾರ್ ಇದೆ. ವರ್ಷಕ್ಕೆ ಎರಡು ಬಾರಿ ೨ ರಿಂದ ೪ ಜನರು ಪೂಜೆಗೆ ಒಳಗೆ ಹೋಗುತ್ತಾರೆ; ಆದರೆ ಈ ವೇಳೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಒಳಗೆ ಹೋಗಿದ್ದರು. ಯಾರೂ ಅಕ್ರಮವಾಗಿ ಪ್ರವೇಶ ದ್ವಾರ ಮುರಿದು ಒಳಗೆ ಪ್ರವೇಶಿಸಿಲ್ಲ. ನಾವು ಅಪರಾಧವನ್ನು ದಾಖಲಿಸಿದ್ದೇವೆ ಎಂದು ಹೇಳಿದರು.
೨. ಪೊಲೀಸ್ ಮಹಾನಿರೀಕ್ಷಕರು, ಹಿಂದೂಗಳು ಯಾವಾಗಲೂ ಮದರಸಾದ ಸಮೀಪದಲ್ಲಿರುವ ಮರದ ಬಳಿ ಹೋಗಿ ಪೂಜೆ ಮಾಡುತ್ತಾರೆ; ಆದರೆ ಈ ಬಾರಿ ಅಲ್ಲಿ ಮರ ಇರಲಿಲ್ಲ ಎಂದು ಹೇಳಿದರು. ಹಿಂದೂಗಳು ಅಲ್ಲಿಗೆ ಹೋಗಿದ್ದರೆ ಅದರಲ್ಲಿ ಹೊಸದೇನೂ ಇಲ್ಲ. ಪ್ರತಿ ವಿಜಯದಶಮಿಯಂದು ಅವರು ಅಲ್ಲಿಗೆ ಪೂಜೆಗೆ ಹೋಗುತ್ತಾರೆ ಎಂದು ಹೇಳಿದರು.
ಅಸದುದ್ದೀನ್ ಓವೈಸಿ ಟೀಕೆ
ಈ ಘಟನೆಯ ಬಗ್ಗೆ ಎಂ.ಐ.ಎಂ.ನ ಅಧ್ಯಕ್ಷರಾದ ಅಸದುದ್ದೀನ್ ಓವೈಸಿ ಅವರು ರಾಜ್ಯದಲ್ಲಿ ಆಡಳಿತಾರೂಢ ಭಾಜಪ ಸರಕಾರವನ್ನು ಟೀಕಿಸಿದ್ದಾರೆ. ಅವರು ಜನಸಮೂಹವನ್ನು ಈ ಘಟನೆಗೆ ಪ್ರೋತ್ಸಾಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!