ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ಮುಖಂಡರ ಹತ್ಯೆಯ ಸಂಚು ಬಹಿರಂಗ !

ಬರೆಯಲಿಯಲ್ಲಿನ ಖಲಿಸ್ತಾನಿ ಭಯೋತ್ಪಾದಕನ ಬಂಧನ

ನವದೆಹಲಿ – ದೆಹಲಿ ಪೋಲಿಸರ ವಿಶೇಷ ಶಾಖೆಯಿಂದ ಉತ್ತರ ಪ್ರದೇಶದಲ್ಲಿನ ಬರೆಲಿಯಿಂದ ಖಲಿಸ್ತಾನಿ ಭಯೋತ್ಪಾದಕ ರಣದಿಪ ಸಿಂಹ ಅಲಿಯಾಸ್ ಎಸ್.ಕೆ. ಖಾರೌದ ಇವನನ್ನು ಬಂಧಿಸಲಾಯಿತು. ಅವನಿಂದ ಚೀನಾ ಬಂದೂಕ ಸಹಿತ ೫ ಆಧುನಿಕ ಬಂದೂಕುಗಳು, ಮದ್ದುಗುಂಡುಗಳು, ಕೆಲವು ಸಂಚಾರವಾಣಿ ಮತ್ತು ಸಿಮಕಾರ್ಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವನ ವಿಚಾರಣೆಯಿಂದ ಪಾಕಿಸ್ತಾನದಲ್ಲಿ ಅಡಗಿರುವ ಖಾಲಿಸ್ತಾನಿ ಭಯೋತ್ಪಾದಕರು ಭಾರತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ನಾಯಕರ ಹತ್ಯೆಯ ಸಂಚು ರೂಪಿಸಿರುವುದು ಬಹಿರಂಗವಾಗಿದೆ. ಖಲಿಸ್ತಾನಿ ಭಯೋತ್ಪಾದಕ ಹರವಿಂದರ ಸಿಂಹ ಅಲಿಯಾಸ್ ರಿಂದಾ ಈ ಸಂಚಿನಲ್ಲಿ ಕೈವಾಡವಿರುವುದು ತಿಳಿದು ಬಂದಿದೆ.

ಪೊಲೀಸ ಅಧಿಕಾರಿ ಎಸ್.ಜಿ.ಎಸ್. ಧಾಲಿವಾಲ ಇವರು, ಕಳೆದ ಕೆಲವು ಸಮಯದಿಂದ ನಾವು, ಭಯೋತ್ಪಾದಕರು ಹತ್ಯೆ ನಡೆಸಲು ಭಾರತದಲ್ಲಿನ ರೌಡಿಗಳ ಸಹಾಯ ಪಡೆಯುತ್ತಾರೆ. ಬಂದಿಸಲಾಗಿರುವ ರಣದೀಪ ಸಿಂಹ ಇವನು ರಿಂದಾ ಇವನೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು. ಅವನಿಗೆ ಧರ್ಮಕ್ಕಾಗಿ ಕೆಲಸ ಮಾಡಲು ಹೇಳಲಾಗಿತ್ತು. ಅದಕ್ಕಾಗಿ ಹಿಂದೂ ನಾಯಕರನ್ನು ಕೊಲ್ಲುವ ಜವಾಬ್ದಾರಿ ಅವನಿಗೆ ನೀಡಲಾಗಿತ್ತು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಜಿಹಾದಿ ಮತ್ತು ಈಗ ಖಲಿಸ್ತಾನಿ ಇಬ್ಬರೂ ಕೂಡ ಹಿಂದೂಗಳನ್ನೇ ಗುರಿಯಾಗಿಸುತ್ತಾರೆ, ಇದನ್ನು ತಿಳಿದು ಕೊಂಡರೆ ಹಿಂದೂಗಳ ರಕ್ಷಣೆ ಯಾರು ಮಾಡುವವರು ? ಈ ಪರಿಸ್ಥಿತಿ ಬದಲಾಗಿಸುವುದಕ್ಕೆ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವುದು ಅನಿವಾರ್ಯವಾಗಿದೆ !