ಬಿಹಾರ ನಕ್ಸಲ ಮುಕ್ತ, ಜಾರ್ಖಂಡನಲ್ಲಿಯೂ ಕೂಡ ಕೊನೆಯ ಹಂತದ ಹೋರಾಟ ! – ಕೇಂದ್ರೀಯ ಮೀಸಲು ಪೊಲೀಸ್ ಪಡೆ

  • ದಾಳಿಯ ಪ್ರಮಾಣ ಶೇ. ೭೭ ರಷ್ಟು ಇಳಿಕೆ !

  • ಸಾವನ್ನಪ್ಪುವ ಪ್ರಮಾಣ ಶೇ. ೮೫ ರಷ್ಟು ಕಡಿಮೆ !

 

ಕೇಂದ್ರೀಯ ಮೀಸಲು ಪೊಲೀಸ ಪಡೆ

ನವದೆಹಲಿ – ಬಿಹಾರ ರಾಜ್ಯ ನಕ್ಸಲರಿಂದ ಮುಕ್ತವಾಗಿದೆ ಹಾಗೂ ಜಾರ್ಖಂಡದಲ್ಲಿ ನಕ್ಸಲ ವಿರೋಧದ ಹೋರಾಟ ಕೊನೆಯ ಹಂತದಲ್ಲಿದೆ. ಜಾರ್ಖಂಡದಲ್ಲಿನ ನಕ್ಸಲ ಬಹುಸಂಖ್ಯಾತವಿರುವ ಬುರಹಾ ಪಹಾಡ ಈ ಕ್ಷೇತ್ರ ನಕ್ಸಲವಾದದಿಂದ ಮುಕ್ತವಾಗಿದ್ದು ಸರಿ ಸುಮಾರು ಮೂವತ್ತು ವರ್ಷದ ನಂತರ ಪೊಲೀಸರು ಅಲ್ಲಿ ನೆಲೆ ಉರುತ್ತಿದ್ದಾರೆ ಎಂದು ಕೇಂದ್ರೀಯ ಮೀಸಲು ಪೊಲೀಸ ಪಡೆಯ ಮಹಾನಿರ್ದೇಶಕ ಕುಲದೀಪ ಸಿಂಹ ಇವರು ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪೊಲೀಸರ ಯಶಸ್ಸಿಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾಹ ಇವರು ಅವರನ್ನು ಅಭಿನಂದಿಸಿದ್ದಾರೆ.

ಕುಲದೀಪ ಸಿಂಹ ತಮ್ಮ ಮಾತನ್ನು ಮುಂದುವರೆಸುತ್ತಾ…

೧. ಬಿಹಾರ ರಾಜ್ಯ ಈಗ ಕಮ್ಯುನಿಸ್ಟ್ ಕಟ್ಟರವಾದದಿಂದ ಮುಕ್ತವಾಗಿದೆ. ಬಲವಂತವಾಗಿ ವಸೂಲಿ ಮಾಡುವ ಗುಂಪುಗಳ ರೂಪದಲ್ಲಿ ಮಾವೋವಾದಿ ಕಾರ್ಯನಿರತ ಆಗಿರಬಹುದು; ಆದರೆ ಈಗ ಸಂಪೂರ್ಣ ಪೂರ್ವ ಭಾರತದಲ್ಲಿ ಅವರ ವರ್ಚಸ್ಸ ಕಡಿಮೆಯಾಗಿದೆ. (ಮಾವೋವಾದಿಗಳಿಂದ ನಡೆಯುವ ಈ ವಸೂಲಿ ಕೂಡ ನಿಲ್ಲಿಸಬೇಕು ! ಸಂಪಾದಕರು)

೨. ಏಪ್ರಿಲ್ ೨೦೨೨ ರಿಂದ ೩ ವಿಶೇಷ ಅಭಿಯಾನಗಳನ್ನು ಆರಂಭಿಸಲಾಗುವುದು. ಇದರಲ್ಲಿ ‘ಆಪರೇಷನ್ ಅಕ್ಟೋಪಸ್’, ‘ಆಪರೇಷನ್ ಥಂಡರಸ್ಟಾರ್ಮ’ ಮತ್ತು ‘ಆಪರೇಷನ್ ಬುಲ್ ಬುಲ್’ ಇದರ ಸಮಾವೇಶವಿದೆ. ಈ ಅಭಿಯಾನದಿಂದಾಗಿ ಕೇಂದ್ರೀಯ ಮೀಸಲು ಪೊಲೀಸ ಪಡೆಗೆ ಜಾರ್ಖಂಡ್ ಛತ್ತೀಸ್ಗಡ್ ಗಡಿಯಲ್ಲಿರುವ ಬುರಹಾ ಪಹಾಡ್ ನಕ್ಸಲರ ನಿಯಂತ್ರಣದಿಂದ ಮುಕ್ತಗೊಳಿಸಲಾಯಿತು. ೩೦ ವರ್ಷಗಳ ನಂತರ ಪೊಲೀಸರಿಗೆ ಈ ಯಶಸ್ಸು ದೊರೆತಿದೆ.

ಸಂಖ್ಯಾವಾರು ಮೂಲಕ ನಕ್ಸಲರಲ್ಲಿ ಆಗಿರುವ ಇಳಿತ ತಿಳಿದುಕೊಳ್ಳೋಣ !

೨೦೧೦ ರಲ್ಲಿ ೬೦ ಜಿಲ್ಲೆಗಳು ನಕ್ಸಲರ ದಾಳಿಯಿಂದ ತೊಂದರೆಗಿಡಾಗಿದ್ದವು. ಇಂದು ಈ ಸಂಖ್ಯೆ ೩೯ ಆಗಿದೆ. ನಕ್ಸಲರಿಂದಾಗಿ ದೊಡ್ಡ ಪ್ರಮಾಣದ ದಾಳಿಗಳು ನಡೆಯುತ್ತಿರುವ ಜಿಲ್ಲೆಗಳ ಸಂಖ್ಯೆ ೨೦೧೫ ರಲ್ಲಿ ೩೫ ರಷ್ಟು ಇತ್ತು. ಅದು ೨೦೨೧ ರಲ್ಲಿ ೨೫ ರಷ್ಟು ಆಗಿದೆ. ಒಟ್ಟಾರೆ ನಕ್ಸಲರ ದಾಳಿಯ ಪೈಕಿ ಈ ಜಿಲ್ಲೆಗಳಲ್ಲಿನ ಪ್ರಮಾಣ ಶೇ. ೯೦ ರಷ್ಟು ಆಗಿದೆ !
೨೦೦೯ ರಲ್ಲಿ ಎಲ್ಲಕ್ಕಿಂತ ಹೆಚ್ಚು ಎಂದರೆ ೨ ಸಾವಿರ ೨೫೮ ನಕ್ಸಲರ ದಾಳಿಗಳು ನಡೆದಿತ್ತು. ೨೦೨೧ ರಲ್ಲಿ ಇದೇ ಸಂಖ್ಯೆ ೫೦೯ ಕ್ಕೆ ಇಳಿಯಿತು ಅಂದರೆ ದಾಳಿಯ ಪ್ರಮಾಣ ಶೇ. ೭೭ ರಷ್ಟು ಕಡಿಮೆ ಆಯಿತು. ೨೦೧೦ ರಲ್ಲಿ ನಕ್ಸಲರ ದಾಳಿಯಿಂದಾಗಿ ಸಾವನ್ನಪ್ಪಿದ ಸಂಖ್ಯೆ ಎಲ್ಲಕ್ಕಿಂತ ಹೆಚ್ಚು ಎಂದರೆ ೧ ಸಾವಿರ ೫ ಆಗಿತ್ತು. ೨೦೨೧ ರಲ್ಲಿ ಇದೇ ಸಂಖ್ಯೆ ೧೪೭ ಎಂದರೆ ಶೇ. ೮೫ ರಷ್ಟು ಕಡಿಮೆ ಆಗಿದೆ.

 

ಕಳೆದ ಕೆಲವು ತಿಂಗಳಲ್ಲಿ ೧೪ ಮಾವೋದಿಗಳು ಹತರಾಗಿದ್ದಾರೆ ಹಾಗೂ ೫೯೦ ಜನರನ್ನು ಬಂಧಿಸಲಾಗಿದೆ ! – ಗೃಹ ಸಚಿವ

ಈ ಯಶಸ್ಸಿನ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಹ ಇವರು, ದೇಶದ ಆಂತರಿಕ ಸುರಕ್ಷೆಯಲ್ಲಿ ಇದು ಐತಿಹಾಸಿಕ ಮೈಲುಗಲ್ಲು ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶಾದ್ಯಂತ ನಕ್ಸಲರ ವಿರೋಧವಾಗುತ್ತಿರುವಾಗ ನಿರ್ಣಾಯಕ ಯುದ್ಧದಲ್ಲಿ ಭದ್ರತಾ ಪಡೆಗೆ ಸಿಕ್ಕಿರುವ ಅಭೂತ ಪೂರ್ವ ವಿಜಯವಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದರು.

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಮಾವೋವಾದಿ ವಿರುದ್ಧ ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ಅಭಿಯಾನದಿಂದ ೧೪ ಮಾವೋವಾದಿಗಳ ಹತ್ಯೆ ಮಾಡಲಾಯಿತು. ಮತ್ತು ೫೯೦ ಕ್ಕಿಂತಲೂ ಹೆಚ್ಚಿನ ಜನರಿಗೆ ಬಂಧಿಸಲಾಗಿದೆ ಅಥವಾ ಅವರು ಸ್ವತಃ ಪೊಲೀಸರಿಗೆ ಶರಣಾಗಿದ್ದಾರೆ.

 

ಸಂಪಾದಕೀಯ ನಿಲುವು

  • ಪೊಲೀಸದಳದ ಈ ಕಾರ್ಯಾಚರಣೆ ಶ್ಲಾಘನೀಯವಾಗಿದೆ; ಆದರೆ ನಕ್ಸಲರ ಮೇಲೆ ಅಂಕುಶ ಇಡುವಾಗ ಜಿಹಾದಿ ಭಯೋತ್ಪಾದಕರು ತಲೆ ದೊರುತ್ತಾರೆ. ಎರಡು ತಿಂಗಳ ಮೊದಲು ಬಿಹಾರ ರಾಜ್ಯದಲ್ಲಿ ಭಾರತಕ್ಕೆ ಇಸ್ಲಾಮಿ ರಾಷ್ಟ್ರ ಎಂದು ಘೋಷಿಸುವ ಹಗಲಗನಸು ಕಾಣುತ್ತಿರುವುದು ಬಹಿರಂಗವಾಗಿದೆ. ಹಾಗೂ ಹಿಂದೂಗಳ ಶಿರಚ್ಛೇದ ಮಾಡುವುದಕ್ಕಾಗಿ ಮತಾಂಧ ಮುಸಲ್ಮಾನರು ಮುಂದೆ ನುಗ್ಗುತ್ತಿದ್ದಾರೆ. ಈ ಎಲ್ಲದರ ಮೇಲೆ ಅಂಕುಶ ಯಾವಾಗ ಇಡುವುದು ?
  • ನಕ್ಸಲರು ಕೆಲವು ನಿಶ್ಚಿತ ಕಾಲದ ನಂತರ ಮತ್ತೆ ಮತ್ತೆ ಕ್ರಿಯಾಶೀಲರಾಗಿ ಪೊಲೀಸ ಮತ್ತು ಸಾಮಾನ್ಯ ಜನರಿಗೆ ಗುರಿಯಾಗಿಸುತ್ತಾರೆ, ಇದು ಇತಿಹಾಸವಾಗಿದೆ. ಆದ್ದರಿಂದ ಅದನ್ನು ಮೂಲಸಹಿತ ನಾಶವಾಗುವವರೆಗೆ ಸರಕಾರ ಪ್ರಯತ್ನಿಸುವುದು ಅವಶ್ಯಕವಾಗಿದೆ !