ಕರ್ನಾಟಕದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಪ್ರಕರಣ
(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಲು ಉಪಯೋಗಿಸುವ ವಸ್ತ್ರ)

ನವದೆಹಲಿ – ಕರ್ನಾಟಕದಲ್ಲಿನ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬ ಧರಿಸಿ ಬರಲು ನಿಷೇಧಿಸಿರುವುದರಿಂದ ಕರ್ನಾಟಕ ಸರಕಾರದ ತೀರ್ಪನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ದಾಖಲಿಸಲಾಗಿದೆ. ಇದರ ಬಗ್ಗೆ ನಡೆದಿರುವ ಎರಡು ಪರ ವಿರೋಧದ ಯುಕ್ತಿವಾದದ ನಂತರ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಆದಷ್ಟು ಬೇಗನೆ ತೀರ್ಪು ನೀಡಲಾಗುವುದು. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅವರ ತೀರ್ಪಿನಲ್ಲಿ ಹಿಜಾಬ್ ಇದು ಧರ್ಮದ ಅವಿಭಾಜ್ಯ ಭಾಗವಾಗಿಲ್ಲ. ವಿದ್ಯಾರ್ಥಿನಿಯರು ಶಾಲೆಯ ಸಮವಸ್ತ್ರ ಧರಿಸಲು ನಿರಾಕರಿಸಲು ಸಾಧ್ಯವಿಲ್ಲ’, ಎಂದು ಹೇಳಿತ್ತು.
ಭಾರತದಲ್ಲಿ ಅನೇಕ ಕುಟುಂಬಗಳಲ್ಲಿ ಹಿಜಾಬ ಅನಿವಾರ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ
ಈ ಅರ್ಜಿಯ ಮೇಲೆ ಸೆಪ್ಟೆಂಬರ್ ೨೧ ರಂದು ನಡೆದ ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹೇಮಂತ ಗುಪ್ತ ಇವರು, ನಾನು ಹಿಜಾಬದ ಸಂದರ್ಭದಲ್ಲಿನ ಒಂದು ಘಟನೆ ಹೇಳಲು ಬಯಸುತ್ತೇನೆ. ನನಗೆ ಪಾಕಿಸ್ತಾನದಲ್ಲಿನ ಲಾಹೋರ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯ ಪರಿಚಯವಿದೆ. ಯಾವಾಗ ಅವರು ಭಾರತಕ್ಕೆ ಬರುತ್ತಿದ್ದರು, ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಬರುತ್ತಿದ್ದರು. ಅವರೆಂದು ಹಿಜಾಬ ಧರಿಸಿರುವುದು ನಾನು ನೋಡಿಲ್ಲ. ಭಾರತದಲ್ಲಿನ ಅನೇಕ ಮುಸಲ್ಮಾನ ಕುಟುಂಬಗಳನ್ನು ನೋಡಿದ್ದೇನೆ, ಎಲ್ಲಿ ಮನೆಯ ಮುಖ್ಯಸ್ಥರು ಅವರ ಹೆಣ್ಣು ಮಕ್ಕಳಿಗೆ ಎಂದೂ ಹಿಜಾಬ ಧರಿಸಲು ಕಡ್ಡಾಯ ಮಾಡಿಲ್ಲ, ಎಂದು ಅವರು ಹೇಳಿದರು.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ