ರಾಜಕೀಯ ಪಕ್ಷಗಳ ದೇಣಿಗೆಯನ್ನು ಮಿತಿಗೊಳಿಸುವ ಪ್ರಯತ್ನ

ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಅವರು ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು ಅವರಿಗೆ ಪತ್ರ ಬರೆದು, ಜನಪ್ರತಿನಿಧಿ ಕಾನೂನಿನಲ್ಲಿ ಹಲವಾರು ತಿದ್ದುಪಡಿಗಳನ್ನು ಶಿಫಾರಸು ಮಾಡಿದ್ದಾರೆ. ‘ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಗೆ ಗರಿಷ್ಠ ಮಿತಿಯನ್ನು ಶೇಕಡಾ ೨೦ ಅಥವಾ ೨೦ ಕೋಟಿ ರೂಪಾಯಿಗಳಿಗಿಂತ ಯಾವುದು ಕಡಿಮೆ ಇರಲಿದೆ ಅದನ್ನು ನಿಗದಿಪಡಿಸಬೇಕು’, ಎಂದು ಅದರಲ್ಲಿ ಹೇಳಿದೆ. ಚುನಾವಣೆಗಳಲ್ಲಿ ಕಪ್ಪುಹಣ ಹರಡುವುದನ್ನು ತಡೆಯಲು ಬೇನಾಮಿ ನಗದು ದೇಣಿಗೆಯ ಮಿತಿಯನ್ನು ೨೦ ಸಾವಿರ ರೂಪಾಯಿಗಳಿಂದ ೨ ಸಾವಿರ ರೂಪಾಯಿಗಳಿಗೆ ಇಳಿಸಲು ಶಿಫಾರಸು ಮಾಡಿದೆ. ಚುನಾವಣಾ ಆಯೋಗದ ಪ್ರಸ್ತುತ ನಿಯಮಗಳ ಪ್ರಕಾರ ದೇಶದ ಎಲ್ಲಾ ರಾಜಕೀಯ ಪಕ್ಷಗಳು ೨೦ ಸಾವಿರ ರೂಪಾಯಿಗಿಂತ ಹೆಚ್ಚಿನ ಎಲ್ಲಾ ದೇಣಿಗೆಗಳನ್ನು ಘೋಷಿಸಬೇಕು. ‘ಚುನಾವಣಾ ಅವಧಿಯಲ್ಲಿ ಅಭ್ಯರ್ಥಿಗಳು ಚುನಾವಣೆಗೆ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಬೇಕು, ಎಂದು ಪತ್ರದಲ್ಲಿ ತಿಳಿಸಲಾಗಿದೆ.
निर्वाचन आयोग ने राजनीतिक दलों को नकद चंदे की सीमा तय करने की अनुशंसा कीhttps://t.co/Tth86A2so3
— रिपब्लिक भारत (@Republic_Bharat) September 20, 2022
ಸಂಪಾದಕೀಯ ನಿಲುವುದೇಣಿಗೆಗಳ ಮೇಲೆ ಅಧಿಕೃತವಾಗಿ ಎಷ್ಟೇ ಮಿತಿಯನ್ನು ವಿಧಿಸಲಾಗಿದ್ದರೂ, ‘ಚುನಾವಣೆಯಲ್ಲಿ ಕಪ್ಪುಹಣವನ್ನು ಹೇಗೆ ಬಳಸಲಾಗುತ್ತದೆ’, ಎಂಬುದು ಹೆಚ್ಚಿನ ನಾಗರಿಕರಿಗೆ ತಿಳಿದಿದೆ. ಇದು ಚುನಾವಣಾ ಆಯೋಗಕ್ಕೆ ಮಾತ್ರ ಎಂದಿಗೂ ಯಾಕೆ ಕಾಣಿಸುವುದಿಲ್ಲ ? |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ