|

ನವದೆಹಲಿ – ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಇವರನ್ನು ಭ್ರಷ್ಟಾಚರ ನಿಗ್ರಹ ದಳ ಬಂದಿಸಿದೆ. ಬಂಧನದ ಸಮಯದಲ್ಲಿ ಅವರ ಮನೆಯ ಸಹಿತ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಇದರಲ್ಲಿ ಎರಡು ಬಂದುಕಗಳು ಮತ್ತು ೨೪ ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಖಾನ ಅವರನ್ನು ಬಂಧಿಸುವ ಸಮಯದಲ್ಲಿ ಅವರ ಸಂಬಂಧಿಕರು ಮತ್ತು ಬೆಂಬಲಗರಿಂದ ದಾಳಿ ನಡೆಸಲಾಯಿತು. ಆದ್ದರಿಂದ ಹೆಚ್ಚುವರಿ ಪೊಲೀಸ ಬಂದೋಬಸ್ತ್ ಮಾಡಲಾಯಿತು. ದಾಂಧಲೆ ನಡೆಸುವವರ ವಿರುದ್ಧ ದೂರು ದಾಖಲಿಸಲಾಗಿದೆ. ಅವರನ್ನು ಕೂಡ ಬಂಧಿಸಲಾಗುವುದು.
ವಕ್ಫ್ ಬೋರ್ಡ್ ಅಕ್ರಮ ಆರೋಪ: ಎಎಪಿ ಶಾಸಕ ಅಮಾನತುಲ್ಲಾ ಖಾನ್, ನಿಕಟವರ್ತಿ ಬಂಧನ
#waqfboard https://t.co/FZ2bDujB0J— vijaykarnataka (@Vijaykarnataka) September 17, 2022
೧. ಅಮಾನತುಲ್ಲಾ ಖಾನ್ ಇವರ ನಿಕಟವರ್ತಿ ಕೌಶರ್ ಇಮಾಮ್ ಸಿದ್ದಿಕಿ ಇವರಿಂದ ಒಂದು ಬಂದುಕು, ಕೆಲವು ಕಾರ್ಟ್ರೆಜ್ ಮತ್ತು ೧೨ ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಹಾಗೂ ಮತ್ತೊಬ್ಬರಿಂದ ಹಮೀದ್ ಅಲಿ ಖಾನ್ ಇವರಿಂದ ೧ ಬಂದೂಕು ಮತ್ತು ೧೨ ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
೨. ಅಮಾನತುಲ್ಲಾ ಖಾನ್ ದೆಹಲಿಯ ವಕ್ಫ ಬೋರ್ಡನ ಅಧ್ಯಕ್ಷ ಇರುವಾಗ ೩೨ ಜನರನ್ನು ಕಾನೂನು ಉಲ್ಲಂಘನೆ ನಡೆಸಿ ನೇಮಕಗೊಳಿಸಿದ್ದರು. ಹಾಗೂ ಬೋರ್ಡನ ಕೆಲವು ಆಸ್ತಿ ಬಾಡಿಗೆ ಕೂಡ ನೀಡಿದ್ದರು, ಎಂದು ಆರೋಪವಿದೆ. ಹಾಗೂ ಬೋರ್ಡನ ಹಣದ ದುರುಪಯೋಗ ಕೂಡ ನಡೆದಿದೆ. ಇದರಲ್ಲಿ ಸರಕಾರ ನೀಡಿರುವ ಅನುದಾನ ಕೂಡ ಒಳಗೊಂಡಿದೆ.
ಸಂಪಾದಕೀಯ ನಿಲುವುಭ್ರಷ್ಟಾಚಾರದ ವಿರುದ್ಧ ಹೋರಾಡಲು ಸ್ಥಾಪಿಸಲಾಗಿದ್ದ ಪಕ್ಷದ ಶಾಸಕರೇ ಭ್ರಷ್ಟಾಚಾರಿ ಆಗಿರುವುದು ಗಮನದಲ್ಲಿಟ್ಟುಕೊಳ್ಳಿರಿ ! ಮತಾಂಧರನ್ನು ಬಂಧಿಸಿದ ನಂತರ ಹೆಚ್ಚಿನ ಸಲ ಪೊಲೀಸರ ಮೇಲೆ ದಾಳಿ ನಡೆಯುತ್ತದೆ, ಈ ವಿಷಯದ ಬಗ್ಗೆ ಯಾವುದೇ ಜಾತ್ಯತೀತ ಪಕ್ಷ, ನಾಯಕರು ಅಥವಾ ಸಂಘಟನೆಗಳು ಎಂದು ಮಾತನಾಡುವುದಿಲ್ಲ ! |
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case