ಗಣೇಶ ಚತುರ್ಥಿಯ ಶುಭಾಶಯ ನೀಡಿದ್ದರಿಂದ ‘ಸರ್ ತನ ಸೇ ಜುದಾ’ದ ಬೆದರಿಕೆ ನೀಡಲಾಗಿದೆ !

  • ಅಂಬೇಡ್ಕರನಗರ(ಉತ್ತರ ಪ್ರದೇಶ) ಇಲ್ಲಿಯ ಸಲಾವುದ್ದೀನ್ ಅಹಮದ್ ಸಿದ್ದಕಿಯಿಂದ ದಾವೆ

  • ಸಿರಾಜ್ ಖಾನ್ ಮತ್ತು ಮಹಮ್ಮದ್ ಮುಶಿರ ಇವರ ಮೇಲೆ ಆರೋಪ

  • ದುಡ್ಡಿನ ವ್ಯವಹಾರದಿಂದ ವಾದ ವಿವಾದ ! – ಪೊಲೀಸರು

ಅಂಬೇಡ್ಕರನಗರ (ಉತ್ತರಪ್ರದೇಶ) – ಇಲ್ಲಿಯ ಸಲಾವುದ್ದೀನ್ ಅಹಮದ್ ಸಿದ್ದಕ್ಕಿಯು ತನಗೆ ಇತರ ಇಬ್ಬರು ಮುಸಲ್ಮಾನ ಯುವಕರಿಂದ ‘ಸರ ತನ ಸೇ ಜುದಾ’ದ (ದೇಹದಿಂದ ಮುಂಡ ಬೇರ್ಪಡಿಸುವುದು) ಈ ಬೆದರಿಕೆ ನೀಡಲಾಗಿದೆ ಎಂದು ಆರೋಪಿಸಿದ್ದಾನೆ. ಸಲಾವುದ್ದೀನ್ ಇವನು ‘ಇಶ್ತಿಯಾಕ್ ಅಹಮದ್ ಇವನಿಗೆ ಗಣೇಶ ಚತುರ್ಥಿಯ ಶುಭಾಶಯಗಳು ನೀಡಿರುವುದರಿಂದ ನನಗೆ ಬೆದರಿಕೆ ಹಾಕಿದ್ದಾರೆ’ ಎಂದು ದಾವೆ ಮಾಡಿದ್ದಾನೆ. ಸಿರಾಜ್ ಖಾನ್ ಮತ್ತು ಮಹಮ್ಮದ್ ಮುಶೀರ ಇವರಿಂದ ಈ ಬೆದರಿಕೆ ನೀಡಲಾಗಿದೆ ಎಂದು ಅವನು ಹೇಳಿದನು. ಇನ್ನೊಂದು ಕಡೆಗೆ ಪೊಲೀಸರು ಮಾತ್ರ ಸಲಾವುದ್ದಿನಿನ ಆರೋಪ ತಳ್ಳಿ ಹಾಕಿ ದುಡ್ಡಿನ ವ್ಯವಹಾರದದಿಂದ ಸಲವುದ್ದೀನ್ ಮತ್ತು ಸಿರಾಜ ಇವರಲ್ಲಿ ವಾದ ವಿವಾದ ನಡೆದಿದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಪೊಲೀಸರು ಇಶ್ತಿಯಾಕ್ ಅಹಮದ್, ಸಿರಾಜ್ ಖಾನ್ ಮತ್ತು ಮಹಮ್ಮದ್ ಮುಶಿರ್ ಇವರ ವಿರುದ್ಧ ದೂರು ದಾಖಲಿಸಿ ಕೊಂಡು ಸಲಾಉದ್ದಿನನಿಗೆ ಅವನ ಬೇಡಿಕೆಯ ಮೇಲೆ ಅವನಿಗೆ ಮನೆಯಲ್ಲಿ ರಕ್ಷಣೆ ನೀಡಲಾಗಿದೆ; ಆದರೆ ಅವನು ಮಾಡಿರುವ ಆರೋಪ ಸುಳ್ಳು ಎಂದು ಸಹ ಹೇಳಲಾಗುತ್ತಿದೆ.