ಮುಸಲ್ಮಾನ ಪತ್ನಿ ಮತ್ತು ಆಕೆಯ ಸಹೋದರ ಇವರಿಗೆ ಕೊಲೆಯ ಬೆದರಿಕೆ ನೀಡಿ ಗೋಮಾಂಸ ತಿನ್ನಿಸಿದ್ದರಿಂದ ಹಿಂದೂ ಯುವಕನ ಆತ್ಮಹತ್ಯೆ !

ಪೊಲೀಸರಿಂದ ಪತ್ನಿ ಮತ್ತು ಆಕೆಯ ಸಹೋದರನ ಮೇಲೆ ದೂರು ದಾಖಲು

ಸೂರತ (ಗುಜರಾತ) – ಇಲ್ಲಿಯ ಉಧನಾ ಪಟೆಲ ನಗರದಲ್ಲಿ ೨ ತಿಂಗಳ ಹಿಂದೆ ರೋಹಿತ ರಾಜಪೂತ (೨೭ ವರ್ಷ) ಈ ಹಿಂದೂ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಅವನಿಗೆ ಬಲವಂತವಾಗಿ ಗೋಮಾಂಸ ತಿನ್ನಲು ಅನಿವಾರ್ಯಗೊಳಿಸಿರುವುದರಿಂದ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಈಗ ಹೊರ ಬಂದಿದೆ. ಯುವಕನ ತಾಯಿ ನೀಡಿರುವ ದೂರಿನಲ್ಲಿ ಅವನ ಪತ್ನಿ ಸೋನಮ ಅಲಿ ಮತ್ತು ಆಕೆಯ ಸಹೋದರ ಮುಕ್ತಾರ್ ಅಲಿ ಇವರ ವಿರುದ್ಧ ದೂರು ದಾಖಲಿಸಲಾಗಿದೆ.

ಜೂನ್ ೨೭ ರಂದು ರೋಹಿತ ಇವನು ಆತ್ಮಹತ್ಯೆ ಮಾಡಿಕೊಂಡಿದ್ದನು; ಆದರೆ ಆ ಸಮಯದಲ್ಲಿ ಅದರ ಹಿಂದಿನ ಕಾರಣ ಸ್ಪಷ್ಟವಾಗಿರಲಿಲ್ಲ. ಕೆಲವು ದಿನಗಳ ಹಿಂದೆ ರೋಹಿತನ ತಾಯಿಗೆ ಅವನ ಸ್ನೇಹಿತರ ಮೂಲಕ, ರೋಹಿತನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಫೇಸ್‌ಬುಕ್ ನಲ್ಲಿ ಒಂದು ಪತ್ರ ಪ್ರಸಾರ ಮಾಡಿದ್ದನು. ಅದರಲ್ಲಿ ಅವನು ಸೋನಮ್ ಅಲಿ ಮತ್ತು ಆಕೆಯ ಸಹೋದರ ಮುಕ್ತಾರ ಅಲಿ ಇವರು ಆತ್ಮಹತ್ಯೆಗಾಗಿ ಹೊಣೆಗಾರರೆಂದು ಹೇಳಿದ್ದಾನೆ. ಅವರಿಬ್ಬರೂ ರೋಹಿತನನ್ನು ಕೊಲ್ಲುವ ಬೆದರಿಕೆ ನೀಡಿ ಬಲವಂತವಾಗಿ ಗೋಮಾಂಸ ತಿನ್ನಿಸಿದರು. ‘ಗೋಮಾಂಸ ತಿಂದಿರುವುದರಿಂದ ನಾನು ಈ ಜಗತ್ತಿನಲ್ಲಿ ಇರಲು ಯೋಗ್ಯ ಅಲ್ಲ’, ಎಂದು ಈ ಪತ್ರದಲ್ಲಿ ಹೇಳುತ್ತಾ ರೋಹಿತ ಆತ್ಮಹತ್ಯೆ ಮಾಡಿಕೊಂಡನು’ ಎಂದು ಹೇಳಿದರು. (ಅಂದಮಾನದಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗ ಮುಸಲ್ಮಾನ ಖೈದಿಗಳು ಹಿಂದೂ ಖೈದಿಗಳನ್ನು ಮತಾಂತರ ಗೊಳಿಸುವುದಕ್ಕೆ ಖಾದ್ಯ ಪದಾರ್ಥಗಳನ್ನು ಉಪಯೋಗಿಸುತ್ತಿರುವುದು ಸ್ವಾತಂತ್ರ್ಯವೀರ ಸಾವರ್ಕರ ಇವರಿಗೆ ತಿಳಿದ ನಂತರ ಅವರು, ‘ಸಂಪೂರ್ಣ ಮತಾಂಧರನ್ನೆ ತಿಂದರೂ ಸಹ, ಆಗಲು ಯಾರು ಕೂಡ ಮತಾಂತರ ಗೊಳ್ಳುವುದಿಲ್ಲ’, ಈ ರೀತಿಯ ಹೇಳಿಕೆ ನೀಡಿದ್ದರು, ಎಂದು ಹೇಳಲಾಗುತ್ತದೆ. ಹಿಂದೂಗಳಿಗೆ ಇದು ತಿಳಿಯದೇ ಇದ್ದರಿಂದ ಅವರು ಭಾವನೆಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ! – ಸಂಪಾದಕರು) ರೋಹಿತ ಕೈಮಗ್ಗದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು ಮತ್ತು ಅಲ್ಲಿ ಅವನು ಸೋನಾಮ ಅಲಿ ಇವಳನ್ನು ಪ್ರೀತಿಸಿದನು. ಮನೆಯವರ ವಿರೋಧ ಇದ್ದರೂ ಸೋನಮ್ ಅಲಿಯ ಜೊತೆಗೆ ವಿವಾಹ ಮಾಡಿಕೊಂಡಿದ್ದನು.

ಸಂಪಾದಕೀಯ ನಿಲುವು

ಮುಸಲ್ಮಾನ ಯುವಕ ‘ಲವ್ ಜಿಹಾದ್’ ಮೂಲಕ ಹಿಂದೂ ಯುವತಿಯರ ಲೈಂಗಿಕ ಶೋಷಣೆ ನಡೆಸಿ ಅವರನ್ನು ಮತಾಂತರಗೊಳಿಸಿ ಅವರ ಮೇಲೆ ಅತ್ಯಾಚಾರ ಮಾಡುತ್ತಾರೆ ಹಾಗೂ ಮುಸಲ್ಮಾನ ಯುವತಿ ಹಿಂದೂ ಯುವಕನನ್ನು ಪ್ರೀತಿಸಿ ಅವನನ್ನು ಧಾರ್ಮಿಕ ರೀತಿ ತೊಂದರೆ ನೀಡಿ ಅವನನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತಾಳೆ !

ಹಿಂದೂ ಯುವಕ ಮತ್ತು ಯುವತಿಯರಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಈ ಗತಿ ಆಗುತ್ತದೆ, ಇದು ಹಿಂದೂಗಳಿಗೆ ಮತ್ತು ಅದರ ಸಂಘಟನೆಗಳಿಗೆ ಲಚ್ಚಸ್ಪದ ! ಈ ಪರಿಸ್ಥಿತಿ ಬದಲಾಯಿಸುವುದಕ್ಕೆ ಹಿಂದೂಗಳಿಗೆ ಧರ್ಮಶಿಕ್ಷಣ ಸಿಗುವುದಕ್ಕಾಗಿ ಹಿಂದೂ ಸಂಘಟನೆಗಳು ಮುಂದಾಳತ್ವ ವಹಿಸುವುದು ಅವಶ್ಯಕವಾಗಿದೆ !