ರಥಯಾತ್ರೆಯ ಮೂಲಕ ಸ್ವಾತಂತ್ರ್ಯವೀರ ಸಾವರ್ಕರರವರ ದೇಶಭಕ್ತಿಯ ಪ್ರಚಾರ ಮಾಡುವರು !

ಬೆಂಗಳೂರು – ಭಾಜಪ ಮುಖಂಡ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯೆಡಿಯೂರಪ್ಪ ಇವರು ಅಗಸ್ಟ ೨೩ರಂದು ನಗರದ ಮೈಸೂರು ಪ್ಯಾಲೇಸ್ನ ಕೋಟೆ ಆಂಜನೇಯ ಮಂದಿರದಿಂದ ‘ವೀರ ಸಾವರ್ಕರ ರಥಯಾತ್ರೆ’ಗೆ ಚಾಲನೆ ನೀಡಿದರು. ಅವರು, “ಇಂತಹ ರಥಯಾತ್ರೆಯ ಮೂಲಕ ವೀರ ಸಾವರ್ಕರರಂತಹ ಜನರ ದೇಶದ ಸ್ವಾತಂತ್ರ್ಯಕ್ಕಾಗಿ ನೀಡಿರುವ ಯೋಗದಾನ ಮತ್ತು ಬಲಿದಾನದ ವಿಷಯದಲ್ಲಿ ಜನರನ್ನು ಜಾಗೃತಗೊಳಿಸಲಾಗುವುದು.” ಈ ರಥಯಾತ್ರೆ ಅಗಸ್ಟ ೩೦ ವರೆಗೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೋಗಲಿದೆ.
ಮೈಸೂರಿನಲ್ಲಿ ಸಾವರ್ಕರ್ ರಥಯಾತ್ರೆ: ಬಿಎಸ್ವೈ ಚಾಲನೆ#karnataka #bsyediyurappa #mysuru #savarkar @BSYBJP
— Asianet Suvarna News (@AsianetNewsSN) August 24, 2022
ಯೆಡಿಯೂರಪ್ಪ ತಮ್ಮ ಮಾತನ್ನು ಮುಂದುವರಿಸಿ, ‘ಸ್ವಾತಂತ್ರ್ಯವೀರ ಸಾವರ್ಕರ ಸ್ವಾತಂತ್ರ್ಯ ಸೈನಿಕರಾಗಿರಲಿಲ್ಲ’, ಎಂದು ಬಿಂಬಿಸುವುದು ಸರಿಯಲ್ಲ. ಯಾರಿಗೆ ರಾಷ್ಟ್ರ ಮತ್ತು ಧರ್ಮದ ಬಗ್ಗೆ ತಿಳಿದಿಲ್ಲವೋ, ಅವರು ಈ ರೀತಿ ಹೇಳಿಕೆ ನೀಡುತ್ತಾರೆ. ವಿರೋಧಿ ಪಕ್ಷದ ಮುಖಂಡರಾಗಿರುವ ಸಿದ್ಧರಾಮಯ್ಯನವರು ಸಾವರ್ಕರರ ವಿಷಯದಲ್ಲಿ ತಪ್ಪಾಗಿ ಹೇಳಿಕೆ ನೀಡುವುದು ಅವರ ವ್ಯಕ್ತಿತ್ವಕ್ಕೆ ಯೋಗ್ಯವಲ್ಲ. ಒಂದು ವೇಳೆ ಅವರು ಇಂತಹ ಹೇಳಿಕೆ ನೀಡುತ್ತಿದ್ದರೆ, ರಾಜ್ಯದ ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ, ನಾವು ಜನರ ಮಧ್ಯೆ ಹೋಗಿ ಸ್ವಾತಂತ್ರ್ಯವೀರ ಸಾವರ್ಕರರ ದೇಶಭಕ್ತಿಯ ಶಾಂತಿಯುತವಾಗಿ ಪ್ರಸಾರ ಮಾಡುವವರಿದ್ದೇವೆ ಎಂದು ಹೇಳಿದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!